ಜೊಯಿಡಾ ತಾಲ್ಲೂಕಿನ ಅಣಶಿಯಲ್ಲಿ ಸ್ವಚ್ಛ ಸಂಕೀರ್ಣದಲ್ಲೇ ಕಸ ಸಂಗ್ರಹಣೆ ವಾಹನ ನಿಲುಗಡೆ ಮಾಡಲಾಗಿದೆ
ದಾಂಡೇಲಿ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈನಾಳ ಗ್ರಾಮದಲ್ಲಿ ಕಸ ಸಂಗ್ರಹಿಸುವ ವಾಹನ ಸಂಚರಿಸುತ್ತಿರುವುದು
ಮುಂಡಗೋಡ ತಾಲ್ಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆ ಕಸವನ್ನು ವಾಹನಕ್ಕೆ ತುಂಬುತ್ತಿರುವುದು

ಅನಗತ್ಯವಾಗಿ ಪ್ಲಾಸ್ಟಿಕ್ ಕಸವನ್ನು ಅತೀ ಹೆಚ್ಚು ತುಂಬುವುದರಿಂದ ನಿರ್ವಹಣೆ ಮಾಡಲು ಕಷ್ಟವಾಗುತ್ತದೆ. ಕೆಲವೇ ಮನೆಗಳಿರುವ ಗ್ರಾಮಗಳಿಗೆ ಸಾಗಲು ವಾಹನದ ಡೀಸೆಲ್ ವೆಚ್ಚ ದುಬಾರಿಯಾಗುತ್ತದೆ. ಅಂತ ಕಡೆ ವಾರಕ್ಕೊಮ್ಮೆ ವಾಹನ ಸಾಗುತ್ತದೆ
ಬಾಲಚಂದ್ರ ಶೆಟ್ಟಿ ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷ
ತಿಂಗಳಿಗೆ ಒಮ್ಮೆ ಬಂದು ಕಸ ಕೇಳುತ್ತಾರೆ. ಆದರೆ ಅವರು ಮನೆಗೆ ಬಂದಾಗ ನಾವು ಕೆಲಸಕ್ಕೆ ಹೋಗಿರುತ್ತೇವೆ. ಬಹುತೇಕ ಗ್ರಾಮದ ಪಕ್ಕದ ರೆಸಾರ್ಟ್ ಕಸ ತೆಗೆದುಕೊಂಡು ಹೋಗುತ್ತಾರೆ
ಜಾನು ಥೋರಟ್ ಕರಿಂಪಾಲಿ ಗ್ರಾಮಸ್ಥ
ಬೇಡ್ಕಣಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಕಟ್ಟಡ ನಿರ್ಮಾಣದ ಕೊನೆಯ ಹಂತದ ಕೆಲಸಗಳು ಬಾಕಿ ಇವೆ. ಇಲ್ಲಿ ಕಸ ಸಂಗ್ರಹಣೆ ಆರಂಭಿಸಿಲ್ಲ
ಉಲ್ಲಾಸ್ ಗೌಡರ್ ಬೇಡ್ಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಸ್ವಚ್ಛ ಸಂಕೀರ್ಣ ಕಸ ಸಂಗ್ರಹಣೆ ವಾಹನಗಳು ನಿಯಮಿತವಾಗಿ ಕೆಲಸ ನಿರ್ವಹಿಸಲು ಎಲ್ಲ ಪಿಡಿಒಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಸಮಸ್ಯೆ ಇರುವ ಕಡೆ ಪರಿಶೀಲಿಸಿ ಪರಿಹಾರ ಕಂಡುಕೊಳ್ಳುತ್ತೇವೆ
ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ