<p><strong>ಯಲ್ಲಾಪುರ:</strong> ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿರುವ ಕೆರೆಗೆ ಎರಡು ಖಾಸಗಿ ಕಂಪನಿಗಳ ರಾಸಾಯನಿಕಯುಕ್ತ ಕಲುಷಿತ ನೀರು ಹರಿದು ಬರುತ್ತಿದ್ದು ಪರಿಣಾಮ ಕೆರೆಯ ನೀರು ಬಳಕೆಗೆ ಯೋಗ್ಯವಿಲ್ಲದಷ್ಟು ವಿಷಯುಕ್ತವಾಗಿದೆ ಎಂಬ ಆರೋಪವಿದೆ.</p>.<p>‘ಕಲುಷಿತಗೊಂಡಿರುವ ಕೆರೆಯ ನೀರನ್ನು ಸೇವಿಸುವುದರಿಂದ ಗ್ರಾಮದಲ್ಲಿ ಚರ್ಮರೋಗ ಸೇರಿದಂತೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿರುವ ಜೊತೆಗೆ ಜಾನುವಾರುಗಳು ಸಾವನ್ನಪ್ಪುತ್ತಿವೆ’ ಎಂಬುದು ಗ್ರಾಮಸ್ಥರ ಆರೋಪ.</p>.<p>‘ಹೊಸಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಲಾಗಾಯ್ತಿನಿಂದಲೂ ತಮ್ಮ ದಿನನಿತ್ಯದ ಚಟುವಟಿಕೆಗೆ ಹೊಸಳ್ಳಿಕೆರೆಯ ನೀರನ್ನೇ ಬಳಸುತ್ತ ಬಂದಿದ್ದಾರೆ. ಕೆರೆಯ ನೀರು ವಿಷಯುಕ್ತವಾಗಿರುವ ಹಿನ್ನೆಲೆಯಲ್ಲಿ ಈಚಿನ ದಿನಗಳಲ್ಲಿ ಜನರಿಗೆ ಚರ್ಮರೋಗ ಕಂಡುಬರುತ್ತಿದೆ. ಜಲಚರಗಳು ಸಾವನ್ನಪ್ಪುತ್ತಿವೆ’ ಎಂದು ಹೊಸಳ್ಳಿ ಗ್ರಾಮದ ನಿವಾಸಿಯೊಬ್ಬರು ದೂರಿದರು.</p>.<p>‘ಹೊಸಳ್ಳಿ ಭಾಗದಲ್ಲಿ ಸದಾ ನೀರಿನ ತೊಂದರೆ ಇದೆ. ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕೆರೆಯ ಅಕ್ಕಪಕ್ಕದಲ್ಲಿ ಕೊಳವೆಬಾವಿ ಕೊರೆಸಿದ್ದು ಕೊಳವೆ ಬಾವಿಯ ನೀರು ಸಹಿತ ಕುಡಿಯಲು ಯೋಗ್ಯವಾಗಿಲ್ಲ. ಅರಣ್ಯದ ಕಾಲುವೆಗಳಲ್ಲಿಯೂ ಈ ಕಲುಷಿತ ನೀರು ಸಂಗ್ರಹವಾಗುತ್ತಿದ್ದು ಮೇಯಲು ಬೆಟ್ಟಕ್ಕೆ ಹೋದ ಜಾನುವಾರುಗಳು ಈ ನೀರನ್ನು ಕುಡಿದು ರೋಗಗ್ರಸ್ಥವಾಗುತ್ತಿವೆ’ ಎಂದು ಸ್ಥಳೀಯರು ಹೇಳಿದ್ದಾರೆ.</p>.<p>ಬಾವಿ-ಕೆರೆಗಳಿಂದ ಸಂಗ್ರಹಿಸಿದ ನೀರು ನೊರೆಗಳಿಂದ ಕೂಡಿದೆ. 3 ಕಿ.ಮೀ ದೂರದಿಂದ ಜನ ನೀರಿಗಾಗಿ ಇಲ್ಲಿ ಬರುತ್ತಾರೆ. ಗ್ರಾಮ ಪಂಚಾಯಿತಿ ನಾಲ್ಕು ದಿನಕ್ಕೆ ಒಮ್ಮೆ ಗ್ರಾಮಸ್ಥರಿಗೆ ನೀರು ಪೂರೈಸುತ್ತಿದೆ. ಆ ನೀರು ಕುಡಿಯಲು ಯೋಗ್ಯವಿಲ್ಲ. ನೀರಿನ ಬಣ್ಣ ಹಾಗೂ ವಾಸನೆ ಬದಲಾಗಿದ್ದು, ರಾಸಾಯನಿಕ ಮಿಶ್ರಣದ ಹಾಗೇ ಭಾಸವಾಗುತ್ತದೆ’ ಎಂಬುದು ಜನರ ಆರೋಪ.</p>.<p>‘ಹೊಸಳ್ಳಿ ಕೆರೆಯ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಇನ್ನಷ್ಟೆ ಬರಬೇಕಿದೆ’ ಎಂದು ಕಿರವತ್ತಿ ಗ್ರಾಮ ಪಂಚಾಯಿತಿ ಪಿಡಿಒ ಶಿವಕುಮಾರ ವಿರಕ್ತಿಮಠ ಪ್ರತಿಕ್ರಿಯಿಸಿದರು.</p>.<p><strong>ಬಳಕೆಗೆ ಯೋಗ್ಯವಲ್ಲ ಎಂದು ವರದಿ</strong></p><p>ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಇಲಾಖೆಯು ಆರೋಗ್ಯ, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ನೀರಿನ ಮಾದರಿ ಸಂಗ್ರಹಿಸಿದೆ. ಈ ನೀರಿನಲ್ಲಿ ಕರಗದ ಕ್ಷಾರೀಯ ಪದಾರ್ಥಗಳ ಪ್ರಮಾಣವು ಅನುಮತಿಸುವ ಮಿತಿಗಿಂತ ಹೆಚ್ಚಿದ್ದು ನೀರು ಕುಡಿಯಲು ಯೋಗ್ಯವಿಲ್ಲ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ವರದಿ ನೀಡಿದೆ. ಕಾರ್ಖಾನೆ ಪಕ್ಕದಲ್ಲಿನ ಕಾಲುವೆ ನೇರವಾಗಿ ಕೆರೆಗೆ ಸಂಪರ್ಕ ಕಲ್ಪಿಸಿದೆ. ಕೆರೆಯ ಅಕ್ಕಪಕ್ಕದಲ್ಲಿ 8 ಎಕರೆ ಕೃಷಿಭೂಮಿ ಇದ್ದು ಕಲುಷಿತ ನೀರು ಹರಿದಲ್ಲಿ ನೀರಿನ ರಸಸಾರ ವ್ಯತ್ಯಾಸವಾಗಿ ಮಣ್ಣಿನ ಫಲವತ್ತತೆ ನಾಶವಾಗಲಿದೆ. ಉತ್ಪಾದನೆ ಕುಂಠಿತಗೊಳ್ಳಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ವರದಿ ನೀಡಿದ್ದಾರೆ. ಈ ನೀರು ಜಾನುವಾರುಗಳಿಗೆ ಕುಡಿಯಲು ಯೋಗ್ಯವಾಗಿಲ್ಲ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<div><blockquote>ಕಾರ್ಖಾನೆಯ ಕಲುಷಿತ ನೀರು ನೀರು ಕೆರೆಗೆ ಸೇರಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಾಗೇನಾದರೂ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ </blockquote><span class="attribution">ಬಿ.ಕೆ.ಸಂತೋಷ್, ಮಾಲಿನ್ಯ ನಿಯಂತ್ರಣ ಮಂಡಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ:</strong> ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿರುವ ಕೆರೆಗೆ ಎರಡು ಖಾಸಗಿ ಕಂಪನಿಗಳ ರಾಸಾಯನಿಕಯುಕ್ತ ಕಲುಷಿತ ನೀರು ಹರಿದು ಬರುತ್ತಿದ್ದು ಪರಿಣಾಮ ಕೆರೆಯ ನೀರು ಬಳಕೆಗೆ ಯೋಗ್ಯವಿಲ್ಲದಷ್ಟು ವಿಷಯುಕ್ತವಾಗಿದೆ ಎಂಬ ಆರೋಪವಿದೆ.</p>.<p>‘ಕಲುಷಿತಗೊಂಡಿರುವ ಕೆರೆಯ ನೀರನ್ನು ಸೇವಿಸುವುದರಿಂದ ಗ್ರಾಮದಲ್ಲಿ ಚರ್ಮರೋಗ ಸೇರಿದಂತೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿರುವ ಜೊತೆಗೆ ಜಾನುವಾರುಗಳು ಸಾವನ್ನಪ್ಪುತ್ತಿವೆ’ ಎಂಬುದು ಗ್ರಾಮಸ್ಥರ ಆರೋಪ.</p>.<p>‘ಹೊಸಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಲಾಗಾಯ್ತಿನಿಂದಲೂ ತಮ್ಮ ದಿನನಿತ್ಯದ ಚಟುವಟಿಕೆಗೆ ಹೊಸಳ್ಳಿಕೆರೆಯ ನೀರನ್ನೇ ಬಳಸುತ್ತ ಬಂದಿದ್ದಾರೆ. ಕೆರೆಯ ನೀರು ವಿಷಯುಕ್ತವಾಗಿರುವ ಹಿನ್ನೆಲೆಯಲ್ಲಿ ಈಚಿನ ದಿನಗಳಲ್ಲಿ ಜನರಿಗೆ ಚರ್ಮರೋಗ ಕಂಡುಬರುತ್ತಿದೆ. ಜಲಚರಗಳು ಸಾವನ್ನಪ್ಪುತ್ತಿವೆ’ ಎಂದು ಹೊಸಳ್ಳಿ ಗ್ರಾಮದ ನಿವಾಸಿಯೊಬ್ಬರು ದೂರಿದರು.</p>.<p>‘ಹೊಸಳ್ಳಿ ಭಾಗದಲ್ಲಿ ಸದಾ ನೀರಿನ ತೊಂದರೆ ಇದೆ. ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕೆರೆಯ ಅಕ್ಕಪಕ್ಕದಲ್ಲಿ ಕೊಳವೆಬಾವಿ ಕೊರೆಸಿದ್ದು ಕೊಳವೆ ಬಾವಿಯ ನೀರು ಸಹಿತ ಕುಡಿಯಲು ಯೋಗ್ಯವಾಗಿಲ್ಲ. ಅರಣ್ಯದ ಕಾಲುವೆಗಳಲ್ಲಿಯೂ ಈ ಕಲುಷಿತ ನೀರು ಸಂಗ್ರಹವಾಗುತ್ತಿದ್ದು ಮೇಯಲು ಬೆಟ್ಟಕ್ಕೆ ಹೋದ ಜಾನುವಾರುಗಳು ಈ ನೀರನ್ನು ಕುಡಿದು ರೋಗಗ್ರಸ್ಥವಾಗುತ್ತಿವೆ’ ಎಂದು ಸ್ಥಳೀಯರು ಹೇಳಿದ್ದಾರೆ.</p>.<p>ಬಾವಿ-ಕೆರೆಗಳಿಂದ ಸಂಗ್ರಹಿಸಿದ ನೀರು ನೊರೆಗಳಿಂದ ಕೂಡಿದೆ. 3 ಕಿ.ಮೀ ದೂರದಿಂದ ಜನ ನೀರಿಗಾಗಿ ಇಲ್ಲಿ ಬರುತ್ತಾರೆ. ಗ್ರಾಮ ಪಂಚಾಯಿತಿ ನಾಲ್ಕು ದಿನಕ್ಕೆ ಒಮ್ಮೆ ಗ್ರಾಮಸ್ಥರಿಗೆ ನೀರು ಪೂರೈಸುತ್ತಿದೆ. ಆ ನೀರು ಕುಡಿಯಲು ಯೋಗ್ಯವಿಲ್ಲ. ನೀರಿನ ಬಣ್ಣ ಹಾಗೂ ವಾಸನೆ ಬದಲಾಗಿದ್ದು, ರಾಸಾಯನಿಕ ಮಿಶ್ರಣದ ಹಾಗೇ ಭಾಸವಾಗುತ್ತದೆ’ ಎಂಬುದು ಜನರ ಆರೋಪ.</p>.<p>‘ಹೊಸಳ್ಳಿ ಕೆರೆಯ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಇನ್ನಷ್ಟೆ ಬರಬೇಕಿದೆ’ ಎಂದು ಕಿರವತ್ತಿ ಗ್ರಾಮ ಪಂಚಾಯಿತಿ ಪಿಡಿಒ ಶಿವಕುಮಾರ ವಿರಕ್ತಿಮಠ ಪ್ರತಿಕ್ರಿಯಿಸಿದರು.</p>.<p><strong>ಬಳಕೆಗೆ ಯೋಗ್ಯವಲ್ಲ ಎಂದು ವರದಿ</strong></p><p>ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಇಲಾಖೆಯು ಆರೋಗ್ಯ, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ನೀರಿನ ಮಾದರಿ ಸಂಗ್ರಹಿಸಿದೆ. ಈ ನೀರಿನಲ್ಲಿ ಕರಗದ ಕ್ಷಾರೀಯ ಪದಾರ್ಥಗಳ ಪ್ರಮಾಣವು ಅನುಮತಿಸುವ ಮಿತಿಗಿಂತ ಹೆಚ್ಚಿದ್ದು ನೀರು ಕುಡಿಯಲು ಯೋಗ್ಯವಿಲ್ಲ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ವರದಿ ನೀಡಿದೆ. ಕಾರ್ಖಾನೆ ಪಕ್ಕದಲ್ಲಿನ ಕಾಲುವೆ ನೇರವಾಗಿ ಕೆರೆಗೆ ಸಂಪರ್ಕ ಕಲ್ಪಿಸಿದೆ. ಕೆರೆಯ ಅಕ್ಕಪಕ್ಕದಲ್ಲಿ 8 ಎಕರೆ ಕೃಷಿಭೂಮಿ ಇದ್ದು ಕಲುಷಿತ ನೀರು ಹರಿದಲ್ಲಿ ನೀರಿನ ರಸಸಾರ ವ್ಯತ್ಯಾಸವಾಗಿ ಮಣ್ಣಿನ ಫಲವತ್ತತೆ ನಾಶವಾಗಲಿದೆ. ಉತ್ಪಾದನೆ ಕುಂಠಿತಗೊಳ್ಳಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ವರದಿ ನೀಡಿದ್ದಾರೆ. ಈ ನೀರು ಜಾನುವಾರುಗಳಿಗೆ ಕುಡಿಯಲು ಯೋಗ್ಯವಾಗಿಲ್ಲ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<div><blockquote>ಕಾರ್ಖಾನೆಯ ಕಲುಷಿತ ನೀರು ನೀರು ಕೆರೆಗೆ ಸೇರಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಾಗೇನಾದರೂ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ </blockquote><span class="attribution">ಬಿ.ಕೆ.ಸಂತೋಷ್, ಮಾಲಿನ್ಯ ನಿಯಂತ್ರಣ ಮಂಡಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>