<p>ಶಿರಸಿ: ರೋಗಬಾಧೆ, ಇಳುವರಿ ಕುಸಿತದ ಕಾರಣಕ್ಕೆ ಬಂಡವಾಳದ ಮುಗ್ಗಟ್ಟಿನಲ್ಲಿ ಸಿಲುಕಿರುವ ಅಡಿಕೆ ಬೆಳೆಗಾರರು, ಜಮೀನಿನ ಸ್ವರೂಪ ಬದಲಾಯಿಸುವ ಸಾಹಸಕ್ಕೆ ಕೈಹಾಕದೆ, ಅಸ್ತಿತ್ವದಲ್ಲಿರುವ ಸಂಪನ್ಮೂಲವನ್ನೇ ಬಳಸಿ ಕಾಳುಮೆಣಸು ಬೆಳೆಯುವತ್ತ ಚಿತ್ತ ಹೊರಳಿಸಿದ್ದಾರೆ. ಇದು ಜಿಲ್ಲೆಯಲ್ಲಿ ಕಾಳುಮೆಣಸು ಕ್ಷೇತ್ರ ವಿಸ್ತರಣೆಗೆ ಕಾರಣವಾಗಿದೆ.</p>.<p>ಅಡಿಕೆಗೆ ಇತ್ತೀಚಿನ ವರ್ಷಗಳಲ್ಲಿ ಎಲೆಚುಕ್ಕಿ ರೋಗ ಮತ್ತು ಕೊಳೆ ರೋಗದ ಬಾಧೆ ತೀವ್ರವಾಗಿ ತಟ್ಟುತ್ತಿದ್ದು, ಇದು ತೋಟಗಾರರನ್ನು ತೀವ್ರ ಆತಂಕಕ್ಕೆ ತಳ್ಳಿದೆ.</p>.<p>ಈ ಹಿನ್ನೆಲೆಯಲ್ಲಿ, ಕೃಷಿಕರು ಆರ್ಥಿಕ ಭದ್ರತೆಗಾಗಿ ಒಂದೇ ಬೆಳೆಯನ್ನು ನಂಬಿ ಕೂರದೆ ಮಿಶ್ರಬೆಳೆ ಪದ್ಧತಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಜತೆಗೆ ಹೆಚ್ಚಿನ ಬಂಡವಾಳ ಹಾಕಿ ಹೊಸ ಬೆಳೆ ಬೆಳೆಯುವುದು ಕಷ್ಟ. ಹೀಗಾಗಿ ಕಡಿಮೆ ಬಂಡವಾಳ ಬೇಡುವ ಜತೆ ಅಡಿಕೆ ಮರಗಳನ್ನೇ ಆಸರೆಯಾಗಿಟ್ಟುಕೊಂಡು ಬೆಳೆಯುವ ಕಾಳುಮೆಣಸು ಕೃಷಿಯತ್ತ ಒಲವು ತೋರುತ್ತಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಕಾಳುಮೆಣಸು ನಾಟಿ ಮಾಡುವ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.</p>.<p>‘ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಪರಿಸರವು ಕಾಳುಮೆಣಸು ಬೆಳೆಗೆ ಅತ್ಯಂತ ಪೂರಕವಾಗಿದೆ. ಪ್ರಮುಖವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ, ಜೊಯಿಡಾ ಹಾಗೂ ಹೊನ್ನಾವರ ಭಾಗದ ತೋಟಗಳಲ್ಲಿ ಕಾಳುಮೆಣಸನ್ನು ಪ್ರಮುಖ ಉಪಬೆಳೆಯಾಗಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ವರ್ಷದ ಹಿಂದೆ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಇದ್ದ ಕಾಳುಮೆಣಸು ಪ್ರಸಕ್ತ ಸಾಲಿನಲ್ಲಿ ಒಟ್ಟು 5,737.48 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ’ ಎಂಬುದು ತೋಟಗಾರಿಕಾ ಇಲಾಖೆ ಮಾಹಿತಿ.</p>.<p>‘ಎರಡು ಮೂರು ವರ್ಷಗಳಿಂದ ಅಡಿಕೆ ಬೆಳೆಗಾರರಿಗೆ ಆರ್ಥಿಕ ನಷ್ಟವಾಗುತ್ತಿದೆ. ಹೀಗಾಗಿ ಬೇರೆ ಬೆಳೆಯನ್ನು ಬೆಳೆಯಲು ಹಣದ ಕೊರತೆಯಾಗುತ್ತಿದೆ. ಆದರೆ ಕಾಳುಮೆಣಸು ಬೆಳೆಗೆ ಪ್ರತ್ಯೇಕವಾಗಿ ದೊಡ್ಡ ಮಟ್ಟದ ಹೂಡಿಕೆ ಬೇಕಾಗಿಲ್ಲ. ಅಡಿಕೆ ತೋಟಕ್ಕೆ ನೀಡುವ ಗೊಬ್ಬರ, ಕೀಟನಾಶಕ, ನೀರು ಮತ್ತು ಆಳುಗಳ ಕೂಲಿಯ ವೆಚ್ಚದಲ್ಲೇ ಕಾಳುಮೆಣಸಿನ ಬಳ್ಳಿಯೂ ಪೋಷಣೆಯಾಗುತ್ತದೆ. ಅಂದರೆ, ಒಂದೇ ವೆಚ್ಚದಲ್ಲಿ ಎರಡು ಬೆಳೆಗಳನ್ನು ಪೋಷಿಸಬಹುದು. ತೋಟದ ನಿರ್ವಹಣಾ ವೆಚ್ಚವನ್ನು ಸರಿದೂಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಡಿಕೆಗೆ ಹೋಲಿಸಿದರೆ ಇದಕ್ಕೆ ತಗಲುವ ಶ್ರಮ ಮತ್ತು ವೆಚ್ಚ ಕಡಿಮೆ’ ಎನ್ನುತ್ತಾರೆ ಕೃಷಿಕ ರಮೇಶ ಹೆಗಡೆ.</p>.<p>‘ಪ್ರಸಕ್ತ ಸನ್ನಿವೇಶದಲ್ಲಿ ಅಡಿಕೆ ತೋಟದ ಉಳಿವಿಗಾಗಿ ಮತ್ತು ರೈತರ ಆರ್ಥಿಕ ಸ್ಥಿರತೆಗಾಗಿ ಕಾಳುಮೆಣಸು ಬೆಳೆಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಈ ಭಾಗದಲ್ಲಿ ಕಾಳುಮೆಣಸು ಕೇವಲ ಉಪಬೆಳೆಯಾಗಿ ಉಳಿಯದೆ, ರೈತರ ಕೈಹಿಡಿಯುವ ಪ್ರಮುಖ ಆದಾಯದ ಮೂಲವಾಗಿ ಹೊರಹೊಮ್ಮುತ್ತಿದೆ’ ಎಂಬುದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಪಿ.ಸತೀಶ ಮಾಹಿತಿಯಾಗಿದೆ.</p>.<div><blockquote>ಹೊಸ ಬೆಳೆಗೆ ಭಾರಿ ಮೂಲಸೌಕರ್ಯ ವೆಚ್ಚ ಬೇಕು. ಆದರೆ ಕಾಳುಮೆಣಸಿಗೆ ಬೆಳೆದು ನಿಂತ ಅಡಿಕೆ ಮರಗಳೇ ಉಚಿತ ಆಸರೆಯಾಗುವುದರಿಂದ ಆರಂಭಿಕ ಬಂಡವಾಳ ಶೂನ್ಯಕ್ಕಿಳಿಯುತ್ತದೆ</blockquote><span class="attribution">ನಾಗಪತಿ ಭಟ್ ಶಿರಸಿ, ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ರೋಗಬಾಧೆ, ಇಳುವರಿ ಕುಸಿತದ ಕಾರಣಕ್ಕೆ ಬಂಡವಾಳದ ಮುಗ್ಗಟ್ಟಿನಲ್ಲಿ ಸಿಲುಕಿರುವ ಅಡಿಕೆ ಬೆಳೆಗಾರರು, ಜಮೀನಿನ ಸ್ವರೂಪ ಬದಲಾಯಿಸುವ ಸಾಹಸಕ್ಕೆ ಕೈಹಾಕದೆ, ಅಸ್ತಿತ್ವದಲ್ಲಿರುವ ಸಂಪನ್ಮೂಲವನ್ನೇ ಬಳಸಿ ಕಾಳುಮೆಣಸು ಬೆಳೆಯುವತ್ತ ಚಿತ್ತ ಹೊರಳಿಸಿದ್ದಾರೆ. ಇದು ಜಿಲ್ಲೆಯಲ್ಲಿ ಕಾಳುಮೆಣಸು ಕ್ಷೇತ್ರ ವಿಸ್ತರಣೆಗೆ ಕಾರಣವಾಗಿದೆ.</p>.<p>ಅಡಿಕೆಗೆ ಇತ್ತೀಚಿನ ವರ್ಷಗಳಲ್ಲಿ ಎಲೆಚುಕ್ಕಿ ರೋಗ ಮತ್ತು ಕೊಳೆ ರೋಗದ ಬಾಧೆ ತೀವ್ರವಾಗಿ ತಟ್ಟುತ್ತಿದ್ದು, ಇದು ತೋಟಗಾರರನ್ನು ತೀವ್ರ ಆತಂಕಕ್ಕೆ ತಳ್ಳಿದೆ.</p>.<p>ಈ ಹಿನ್ನೆಲೆಯಲ್ಲಿ, ಕೃಷಿಕರು ಆರ್ಥಿಕ ಭದ್ರತೆಗಾಗಿ ಒಂದೇ ಬೆಳೆಯನ್ನು ನಂಬಿ ಕೂರದೆ ಮಿಶ್ರಬೆಳೆ ಪದ್ಧತಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಜತೆಗೆ ಹೆಚ್ಚಿನ ಬಂಡವಾಳ ಹಾಕಿ ಹೊಸ ಬೆಳೆ ಬೆಳೆಯುವುದು ಕಷ್ಟ. ಹೀಗಾಗಿ ಕಡಿಮೆ ಬಂಡವಾಳ ಬೇಡುವ ಜತೆ ಅಡಿಕೆ ಮರಗಳನ್ನೇ ಆಸರೆಯಾಗಿಟ್ಟುಕೊಂಡು ಬೆಳೆಯುವ ಕಾಳುಮೆಣಸು ಕೃಷಿಯತ್ತ ಒಲವು ತೋರುತ್ತಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಕಾಳುಮೆಣಸು ನಾಟಿ ಮಾಡುವ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.</p>.<p>‘ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಪರಿಸರವು ಕಾಳುಮೆಣಸು ಬೆಳೆಗೆ ಅತ್ಯಂತ ಪೂರಕವಾಗಿದೆ. ಪ್ರಮುಖವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ, ಜೊಯಿಡಾ ಹಾಗೂ ಹೊನ್ನಾವರ ಭಾಗದ ತೋಟಗಳಲ್ಲಿ ಕಾಳುಮೆಣಸನ್ನು ಪ್ರಮುಖ ಉಪಬೆಳೆಯಾಗಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ವರ್ಷದ ಹಿಂದೆ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಇದ್ದ ಕಾಳುಮೆಣಸು ಪ್ರಸಕ್ತ ಸಾಲಿನಲ್ಲಿ ಒಟ್ಟು 5,737.48 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ’ ಎಂಬುದು ತೋಟಗಾರಿಕಾ ಇಲಾಖೆ ಮಾಹಿತಿ.</p>.<p>‘ಎರಡು ಮೂರು ವರ್ಷಗಳಿಂದ ಅಡಿಕೆ ಬೆಳೆಗಾರರಿಗೆ ಆರ್ಥಿಕ ನಷ್ಟವಾಗುತ್ತಿದೆ. ಹೀಗಾಗಿ ಬೇರೆ ಬೆಳೆಯನ್ನು ಬೆಳೆಯಲು ಹಣದ ಕೊರತೆಯಾಗುತ್ತಿದೆ. ಆದರೆ ಕಾಳುಮೆಣಸು ಬೆಳೆಗೆ ಪ್ರತ್ಯೇಕವಾಗಿ ದೊಡ್ಡ ಮಟ್ಟದ ಹೂಡಿಕೆ ಬೇಕಾಗಿಲ್ಲ. ಅಡಿಕೆ ತೋಟಕ್ಕೆ ನೀಡುವ ಗೊಬ್ಬರ, ಕೀಟನಾಶಕ, ನೀರು ಮತ್ತು ಆಳುಗಳ ಕೂಲಿಯ ವೆಚ್ಚದಲ್ಲೇ ಕಾಳುಮೆಣಸಿನ ಬಳ್ಳಿಯೂ ಪೋಷಣೆಯಾಗುತ್ತದೆ. ಅಂದರೆ, ಒಂದೇ ವೆಚ್ಚದಲ್ಲಿ ಎರಡು ಬೆಳೆಗಳನ್ನು ಪೋಷಿಸಬಹುದು. ತೋಟದ ನಿರ್ವಹಣಾ ವೆಚ್ಚವನ್ನು ಸರಿದೂಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಡಿಕೆಗೆ ಹೋಲಿಸಿದರೆ ಇದಕ್ಕೆ ತಗಲುವ ಶ್ರಮ ಮತ್ತು ವೆಚ್ಚ ಕಡಿಮೆ’ ಎನ್ನುತ್ತಾರೆ ಕೃಷಿಕ ರಮೇಶ ಹೆಗಡೆ.</p>.<p>‘ಪ್ರಸಕ್ತ ಸನ್ನಿವೇಶದಲ್ಲಿ ಅಡಿಕೆ ತೋಟದ ಉಳಿವಿಗಾಗಿ ಮತ್ತು ರೈತರ ಆರ್ಥಿಕ ಸ್ಥಿರತೆಗಾಗಿ ಕಾಳುಮೆಣಸು ಬೆಳೆಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಈ ಭಾಗದಲ್ಲಿ ಕಾಳುಮೆಣಸು ಕೇವಲ ಉಪಬೆಳೆಯಾಗಿ ಉಳಿಯದೆ, ರೈತರ ಕೈಹಿಡಿಯುವ ಪ್ರಮುಖ ಆದಾಯದ ಮೂಲವಾಗಿ ಹೊರಹೊಮ್ಮುತ್ತಿದೆ’ ಎಂಬುದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಪಿ.ಸತೀಶ ಮಾಹಿತಿಯಾಗಿದೆ.</p>.<div><blockquote>ಹೊಸ ಬೆಳೆಗೆ ಭಾರಿ ಮೂಲಸೌಕರ್ಯ ವೆಚ್ಚ ಬೇಕು. ಆದರೆ ಕಾಳುಮೆಣಸಿಗೆ ಬೆಳೆದು ನಿಂತ ಅಡಿಕೆ ಮರಗಳೇ ಉಚಿತ ಆಸರೆಯಾಗುವುದರಿಂದ ಆರಂಭಿಕ ಬಂಡವಾಳ ಶೂನ್ಯಕ್ಕಿಳಿಯುತ್ತದೆ</blockquote><span class="attribution">ನಾಗಪತಿ ಭಟ್ ಶಿರಸಿ, ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>