ಪ್ರತಿದಿನ ಸಂಜೆ 4.30ಕ್ಕೆ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ. ಕೊಳಗಿ ಕೇಶವ ಹೆಗಡೆ, ಶಂಕರ ಭಾಗವತ ಯಲ್ಲಾಪುರ, ಸರ್ವೇಶ್ವರ ಹೆಗಡೆ ಮೂರೂರು, ಅನಂತ ಹೆಗಡೆ ದಂತಳಿಗೆ, ಗೋಪಾಲಕೃಷ್ಣ ಹೆಗಡೆ ಜೋಗಿಮನೆ, ಪರಮೇಶ್ವರ ಭಂಡಾರಿ ಕರ್ಕಿ, ಪಿ.ಕೆ.ಹೆಗಡೆ ಹರಿಕೇರಿ, ವಿದ್ವಾನ್ ಉಮಾಕಾಂತ ಭಟ್ಟ, ಡಾ.ಜಿ.ಎಲ್.ಹೆಗಡೆ, ವಾಸುದೇವರಂಗ ಭಟ್ಟ, ಹರೀಶ್ ಬಳಂತಿಮೊಗರು, ಗಣಪತಿ ಭಟ್ಟ, ಸಂಕದಗುಂಡಿ, ಗಣರಾಜ ಕುಂಬ್ಳೆ, ನಾರಾಯಣ ಯಾಜಿ, ಗ.ನಾ.ಭಟ್ಟ, ಮೈಸೂರು, ಜಿ.ವಿ.ಹೆಗಡೆ ಮೂರೂರು, ಮಹೇಶ ಭಟ್ಟ, ಉಮಚಗಿ ಮೊದಲಾದ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳಲಿದ್ದಾರೆ.