<p><strong>ಯಲ್ಲಾಪುರ</strong>: ‘ಭಗವದ್ಗೀತೆ ಸಮಾಜದಲ್ಲಿ ಸೌಹಾರ್ದ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.</p>.<p>ಕಾಸರಗೋಡಿನ ಗೀತಾಜ್ಞಾನ ಯಜ್ಞ ಟ್ರಸ್ಟ್ ಭಾನುವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಆಯೋಜಿಸಿದ್ದ 11ನೇ ರಾಜ್ಯಮಟ್ಟದ ಸ್ನೇಹ ಸಮ್ಮಿಲನದಲ್ಲಿ ಅವರು ಮಾತನಾಡಿದರು.</p>.<p>ಗೀತಾಜ್ಞಾನ ಯಜ್ಞ ಟ್ರಸ್ಟ್ನ ಟ್ರಸ್ಟಿ ಉದಯಶಂಕರ ಭಟ್ ಮಾತನಾಡಿ, ‘ಭಗವದ್ಗೀತೆಯ ಜ್ಞಾನವನ್ನು ಮೈಗೂಡಿಸಿಕೊಂಡು ಅದನ್ನು ಅನುಭವ ವೇದ್ಯವಾಗಿಸಿಕೊಳ್ಳಬೇಕು. ಆಗ ನಮ್ಮಲ್ಲಿ ಗೀತೆಯ ಬೆಳಕು ಹರಿಯುತ್ತದೆ’ ಎಂದರು.</p>.<p>ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ, ‘ಭಗವದ್ಗೀತೆ, ರಾಮಾಯಣ, ಮಹಾಭಾರತ ಮೊದಲಾದ ಭಾರತೀಯ ಕಾವ್ಯಗಳು ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು’ ಎಂದರು.</p>.<p>ಗೀತಾಜ್ಞಾನ ಯಜ್ಞ ಟ್ರಸ್ಟ್ನ ಟ್ರಸ್ಟಿ ವಿಜಯ ಕಾನ್ಗುರು ಮಾತನಾಡಿದರು. ಗೀತಾಜ್ಞಾನ ಯಜ್ಞ ಟ್ರಸ್ಟ್ನ ಪ್ರಧಾನ ಸಂಚಾಲಕಿ ರಚನಾ ಹೆಗಡೆ ಅವಲೋಕನ ನೆರವೇರಿಸಿದರು.</p>.<p>ವಿದ್ವಾನ್ ಶಂಕರ ಭಟ್ ಬಾಲಿಗದ್ದೆ, ಗೀತಾಜ್ಞಾನ ಯಜ್ಞ ಟ್ರಸ್ಟ್ನ ತಾಲ್ಲೂಕು ಸಂಚಾಲಕಿ ವಿನುತಾ ಕೋಟೆಮನೆ, ಪ್ರಮುಖರಾದ ವನಜಾಕ್ಷಿ ಶಿವರಾಮ ಹೆಬ್ಬಾರ್ , ಸುರೇಶ ಶಾನಭಾಗ ಇದ್ದರು. ರಶ್ಮಿ ರಾಜಾರಾಮ ನಂದೊಳ್ಳಿ ಸ್ವಾಗತಿಸಿದರು. ಕೋಮಲಾ ಭಟ್ಟ ಶಿರಸಿ, ಗೌತಮಿ ಸಿದ್ದಿ, ಶ್ಯಾಮಲಾ ಕೆರೆಗದ್ದೆ ಅನಿಸಿಕೆ ವ್ಯಕ್ತಪಡಿಸಿದರು. ರಾಮಕೃಷ್ಣ ಕವಡಿಕೆರೆ ವಂದಿಸಿದರು. ಶಿಕ್ಷಕಿಯರಾದ ಮಾದೇವಿ ಭಟ್ ಮತ್ತು ವನಿತಾ ಭಾಗ್ವತ ನಿರ್ವಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-20-1617891881</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ‘ಭಗವದ್ಗೀತೆ ಸಮಾಜದಲ್ಲಿ ಸೌಹಾರ್ದ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.</p>.<p>ಕಾಸರಗೋಡಿನ ಗೀತಾಜ್ಞಾನ ಯಜ್ಞ ಟ್ರಸ್ಟ್ ಭಾನುವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಆಯೋಜಿಸಿದ್ದ 11ನೇ ರಾಜ್ಯಮಟ್ಟದ ಸ್ನೇಹ ಸಮ್ಮಿಲನದಲ್ಲಿ ಅವರು ಮಾತನಾಡಿದರು.</p>.<p>ಗೀತಾಜ್ಞಾನ ಯಜ್ಞ ಟ್ರಸ್ಟ್ನ ಟ್ರಸ್ಟಿ ಉದಯಶಂಕರ ಭಟ್ ಮಾತನಾಡಿ, ‘ಭಗವದ್ಗೀತೆಯ ಜ್ಞಾನವನ್ನು ಮೈಗೂಡಿಸಿಕೊಂಡು ಅದನ್ನು ಅನುಭವ ವೇದ್ಯವಾಗಿಸಿಕೊಳ್ಳಬೇಕು. ಆಗ ನಮ್ಮಲ್ಲಿ ಗೀತೆಯ ಬೆಳಕು ಹರಿಯುತ್ತದೆ’ ಎಂದರು.</p>.<p>ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ, ‘ಭಗವದ್ಗೀತೆ, ರಾಮಾಯಣ, ಮಹಾಭಾರತ ಮೊದಲಾದ ಭಾರತೀಯ ಕಾವ್ಯಗಳು ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು’ ಎಂದರು.</p>.<p>ಗೀತಾಜ್ಞಾನ ಯಜ್ಞ ಟ್ರಸ್ಟ್ನ ಟ್ರಸ್ಟಿ ವಿಜಯ ಕಾನ್ಗುರು ಮಾತನಾಡಿದರು. ಗೀತಾಜ್ಞಾನ ಯಜ್ಞ ಟ್ರಸ್ಟ್ನ ಪ್ರಧಾನ ಸಂಚಾಲಕಿ ರಚನಾ ಹೆಗಡೆ ಅವಲೋಕನ ನೆರವೇರಿಸಿದರು.</p>.<p>ವಿದ್ವಾನ್ ಶಂಕರ ಭಟ್ ಬಾಲಿಗದ್ದೆ, ಗೀತಾಜ್ಞಾನ ಯಜ್ಞ ಟ್ರಸ್ಟ್ನ ತಾಲ್ಲೂಕು ಸಂಚಾಲಕಿ ವಿನುತಾ ಕೋಟೆಮನೆ, ಪ್ರಮುಖರಾದ ವನಜಾಕ್ಷಿ ಶಿವರಾಮ ಹೆಬ್ಬಾರ್ , ಸುರೇಶ ಶಾನಭಾಗ ಇದ್ದರು. ರಶ್ಮಿ ರಾಜಾರಾಮ ನಂದೊಳ್ಳಿ ಸ್ವಾಗತಿಸಿದರು. ಕೋಮಲಾ ಭಟ್ಟ ಶಿರಸಿ, ಗೌತಮಿ ಸಿದ್ದಿ, ಶ್ಯಾಮಲಾ ಕೆರೆಗದ್ದೆ ಅನಿಸಿಕೆ ವ್ಯಕ್ತಪಡಿಸಿದರು. ರಾಮಕೃಷ್ಣ ಕವಡಿಕೆರೆ ವಂದಿಸಿದರು. ಶಿಕ್ಷಕಿಯರಾದ ಮಾದೇವಿ ಭಟ್ ಮತ್ತು ವನಿತಾ ಭಾಗ್ವತ ನಿರ್ವಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-20-1617891881</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>