<p><strong>ಯಲ್ಲಾಪುರ</strong>: ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಪಶ್ಚಿಮ ಘಟ್ಟ ಕುರಿತ ಅಧ್ಯಯನ ಸಂಶೋಧನಾ ಕಾಯಾ೯ಗಾರ ಈ ಕೆಳಗಿನ ನಿರ್ಣಯ ಅಂಗೀಕರಿಸಿದೆ.</p>.<p>l ಜಗತ್ತಿನಲ್ಲಿಯೇ ಅತಿ ಅಪರೂಪದ ಜೀವವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಅಧ್ಯಯನ ಹಾಗೂ ಸಂರಕ್ಷಣೆಗೆ ಸಕಾ೯ರ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಬೇಕು.</p>.<p>l ಸಹ್ಯಾದ್ರಿಯ ನದಿ ಕಣಿವೆಗಳ ಸಂರಕ್ಷಣೆ ಕುರಿತು ವಿಜ್ಞಾನ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ನೀಡಿದ ಅಧ್ಯಯನ ವರದಿಗಳ ಶಿಫಾರಸುಗಳನ್ನು ಜಾರಿಮಾಡಲು ಸಕಾ೯ರಗಳು ಮುಂದಾಗಬೇಕು.</p>.<p>l ಕನಾ೯ಟಕ ಪಶ್ಚಿಮ ಘಟ್ಟದ ಪರಿಸರ ಧಾರಣ ಸಾಮಥ್ಯ೯ ಅಧ್ಯಯನಕ್ಕೆ ರಾಜ್ಯ ಸಕಾ೯ರ ಆದೇಶ ಮಾಡಬೇಕು.</p>.<p>l ಹವಾಮಾನ ಬದಲಾವಣೆ ಕಾರಣದಿಂದ ಕೃಷಿ, ತೋಟಗಾರಿಕೆ ಅರಣ್ಯದ ಮೇಲೆ ಆಗಿರುವ ಪರಿಣಾಮಗಳ ಕುರಿತ ಅಧ್ಯಯನ ವರದಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು.</p>.<p>l ಸಂಶೋಧನಾ ಸಂಸ್ಥೆ, ವಿಶ್ವವಿದ್ಯಾಲಯಗಳ ಅಧ್ಯಯನಗಳ ಮುಖ್ಯಾಂಶ, ಶಿಫಾರಸು ಕನ್ನಡದಲ್ಲಿ ಲಭ್ಯವಾಗಬೇಕು. ಹಾಗೂ ಈ ಮಾಹಿತಿಗಳನ್ನು ಪಂಚಾಯತ ಜೀವವೈವಿಧ್ಯ ಸಮಿತಿಗಳ ಮೂಲಕ ಹಳ್ಳಿಗಳಿಗೆ ತಲುಪಿಸುವ ಕ್ರಮ ಜರುಗಬೇಕು.</p>.<p>l ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರ, ಅರಣ್ಯ ಇಲಾಖೆಯ ಸಂಶೋಧನಾ ವಿಭಾಗ, ಜೌಶಧಿ ಮೂಲಿಕಾ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಮನ್ವಯ ಸಮಿತಿ ರಚಿಸಿ ಅಧ್ಯಯನಗಳು ವ್ಯವಸ್ಥಿತವಾಗಿ- ಸಮಗ್ರವಾಗಿ ನಡೆಯಲು ಜೀವ ವೈವಿಧ್ಯ ಮಂಡಳಿ ಸಂಯೋಜನೆ ಮಾಡಬೇಕು. ಈ ಬಗ್ಗೆ ಅರಣ್ಯ -ಪರಿಸರ ಸಚಿವರು ಆದೇಶ ನೀಡಬೇಕು.</p>.<p>l 2021ರಲ್ಲಿ ಸಲ್ಲಿಸಿದ ಭೂ ಕುಸಿತ ಅಧ್ಯಯನ ವರದಿ ಶಿಫಾರಸುಗಳ ತ್ವರಿತ ಜಾರಿ ಆಗಬೇಕು.</p>.<p>l ಜೀವವೈವಿಧ್ಯ ಮಂಡಳಿ ನೇತೃತ್ವದಲ್ಲಿ ಪರಿಸರ, ಅರಣ್ಯ, ಜೀವವೈವಿಧ್ಯ ತಜ್ಞರು ಮತ್ತು ಸಂಸ್ಥೆಗಳ ನಿಯೋಗ ರಾಜ್ಯದ ಮುಖ್ಯಮಂತ್ರಿ -ಅರಣ್ಯ ಸಚಿವರನ್ನು ಭೇಟಿ ಮಾಡಿ ಸಹ್ಯಾದ್ರಿಯ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಬೇಕು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-20-572516000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಪಶ್ಚಿಮ ಘಟ್ಟ ಕುರಿತ ಅಧ್ಯಯನ ಸಂಶೋಧನಾ ಕಾಯಾ೯ಗಾರ ಈ ಕೆಳಗಿನ ನಿರ್ಣಯ ಅಂಗೀಕರಿಸಿದೆ.</p>.<p>l ಜಗತ್ತಿನಲ್ಲಿಯೇ ಅತಿ ಅಪರೂಪದ ಜೀವವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಅಧ್ಯಯನ ಹಾಗೂ ಸಂರಕ್ಷಣೆಗೆ ಸಕಾ೯ರ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಬೇಕು.</p>.<p>l ಸಹ್ಯಾದ್ರಿಯ ನದಿ ಕಣಿವೆಗಳ ಸಂರಕ್ಷಣೆ ಕುರಿತು ವಿಜ್ಞಾನ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ನೀಡಿದ ಅಧ್ಯಯನ ವರದಿಗಳ ಶಿಫಾರಸುಗಳನ್ನು ಜಾರಿಮಾಡಲು ಸಕಾ೯ರಗಳು ಮುಂದಾಗಬೇಕು.</p>.<p>l ಕನಾ೯ಟಕ ಪಶ್ಚಿಮ ಘಟ್ಟದ ಪರಿಸರ ಧಾರಣ ಸಾಮಥ್ಯ೯ ಅಧ್ಯಯನಕ್ಕೆ ರಾಜ್ಯ ಸಕಾ೯ರ ಆದೇಶ ಮಾಡಬೇಕು.</p>.<p>l ಹವಾಮಾನ ಬದಲಾವಣೆ ಕಾರಣದಿಂದ ಕೃಷಿ, ತೋಟಗಾರಿಕೆ ಅರಣ್ಯದ ಮೇಲೆ ಆಗಿರುವ ಪರಿಣಾಮಗಳ ಕುರಿತ ಅಧ್ಯಯನ ವರದಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು.</p>.<p>l ಸಂಶೋಧನಾ ಸಂಸ್ಥೆ, ವಿಶ್ವವಿದ್ಯಾಲಯಗಳ ಅಧ್ಯಯನಗಳ ಮುಖ್ಯಾಂಶ, ಶಿಫಾರಸು ಕನ್ನಡದಲ್ಲಿ ಲಭ್ಯವಾಗಬೇಕು. ಹಾಗೂ ಈ ಮಾಹಿತಿಗಳನ್ನು ಪಂಚಾಯತ ಜೀವವೈವಿಧ್ಯ ಸಮಿತಿಗಳ ಮೂಲಕ ಹಳ್ಳಿಗಳಿಗೆ ತಲುಪಿಸುವ ಕ್ರಮ ಜರುಗಬೇಕು.</p>.<p>l ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರ, ಅರಣ್ಯ ಇಲಾಖೆಯ ಸಂಶೋಧನಾ ವಿಭಾಗ, ಜೌಶಧಿ ಮೂಲಿಕಾ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಮನ್ವಯ ಸಮಿತಿ ರಚಿಸಿ ಅಧ್ಯಯನಗಳು ವ್ಯವಸ್ಥಿತವಾಗಿ- ಸಮಗ್ರವಾಗಿ ನಡೆಯಲು ಜೀವ ವೈವಿಧ್ಯ ಮಂಡಳಿ ಸಂಯೋಜನೆ ಮಾಡಬೇಕು. ಈ ಬಗ್ಗೆ ಅರಣ್ಯ -ಪರಿಸರ ಸಚಿವರು ಆದೇಶ ನೀಡಬೇಕು.</p>.<p>l 2021ರಲ್ಲಿ ಸಲ್ಲಿಸಿದ ಭೂ ಕುಸಿತ ಅಧ್ಯಯನ ವರದಿ ಶಿಫಾರಸುಗಳ ತ್ವರಿತ ಜಾರಿ ಆಗಬೇಕು.</p>.<p>l ಜೀವವೈವಿಧ್ಯ ಮಂಡಳಿ ನೇತೃತ್ವದಲ್ಲಿ ಪರಿಸರ, ಅರಣ್ಯ, ಜೀವವೈವಿಧ್ಯ ತಜ್ಞರು ಮತ್ತು ಸಂಸ್ಥೆಗಳ ನಿಯೋಗ ರಾಜ್ಯದ ಮುಖ್ಯಮಂತ್ರಿ -ಅರಣ್ಯ ಸಚಿವರನ್ನು ಭೇಟಿ ಮಾಡಿ ಸಹ್ಯಾದ್ರಿಯ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಬೇಕು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-20-572516000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>