<p><strong>ಯಲ್ಲಾಪುರ</strong>: ‘ಗ್ರಾಮೀಣ ಜನರ ಬದುಕು ರೂಪಾಂತರಕ್ಕೆ ಒಳಗಾಗುತ್ತಿದೆ. ರೂಪಾಂತರವಿಲ್ಲದೇ ವಿಕಾಸ ಇಲ್ಲ. ಹಾಗಾಗಿ ಈ ರೂಪಾಂತರವನ್ನು ಸ್ವೀಕರಿಸಿ ನಾವು ಬದಲಾದ ಕಾಲಘಟ್ಟಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾದದ್ದು ಅಗತ್ಯ’ ಎಂದು ಕತೆಗಾರ ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.</p>.<p>ಬೀಗಾರಿನ ಕಲ್ಮನೆ ಆವಾರದಲ್ಲಿ ಭಾನುವಾರ ನಡೆದ ಮನೆಯಂಗಳದಲ್ಲಿ ಸಾಹಿತ್ಯ ಚಿಂತನ ಕಾರ್ಯಕ್ರಮದ ಮೂರನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.</p>.<p>‘ಇಂದಿನ ಸಂಪರ್ಕ ಯುಗ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳನ್ನು ಕ್ಷೀಣಿಸುತ್ತಿದೆ. ಸಾಹಿತ್ಯದಲ್ಲಿ ಅಂತಿಮವಾಗಿ ಮುಖ್ಯವಾದದ್ದು ಸಂಬಂಧ. ಹಾಗಾಗಿ ಸಂಬಂಧ ಬೆಳೆಯುವಂತಹ ಕಾರ್ಯಕ್ರಮವೂ ಅಷ್ಷೇ ಮುಖ್ಯ. ಹುಟ್ಟು, ಮದುವೆ, ಸಾವು ಈ ಮೂರು ಸಂಗತಿಗಳ ಜೀವಂತ ಅನುಭವ ಈ ತಲೆಮಾರಿನ ಜನರಿಗೆ ಆಗುತ್ತಿಲ್ಲ. ಬದುಕಿನಲ್ಲಿ ಪರಸ್ಪರ ಅವಲಂಬನೆ ಕಡಿಮೆಯಾಗುತ್ತಿದೆ. ಸಹಜ ಜೀವನಕ್ರಮ ತಪ್ಪುತ್ತಿದೆ’ ಎಂದರು.</p>.<p>ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ‘ಕಲೆ, ಸಾಹಿತ್ಯ, ಸಂಗೀತ ಇವೆಲ್ಲ ದೇಶದ ಆಧಾರ ಸ್ತಂಭಗಳು. ಇವುಗಳ ಕುರಿತು ಶ್ರದ್ಧೆ ಅಗತ್ಯ. ಇಂದು ಸರಿಯಾಗಿ ಅರಿತುಕೊಳ್ಳದೇ ಎಲ್ಲವನ್ನೂ ಟೀಕಿಸುವ ಮನೋಧರ್ಮ ಬೆಳೆಯುತ್ತಿದೆ’ ಎಂದು ಬೇಸರಿಸಿದರು.</p>.<p>ಪ್ರಮುಖರಾದ ದತ್ತಾತ್ರೇಯ ಭಟ್ಟ ಕಣ್ಣಿಪಾಲ, ಗಣಪತಿ ಮೆಣಸುಮನೆ, ನಾರಾಯಣ ಹೆಗಡೆ ಅವರು ಹರಿಪ್ರಕಾಶ ಕೋಣೆಮನೆಯವರ ಕೃತಿಯನ್ನು ಅವಲೋಕಿಸಿದರು.</p>.<p>ತಾಳಮದ್ದಲೆ ಅರ್ಥದಾರಿ ಎಂ.ಎನ್.ಹೆಗಡೆ ಹಳವಳ್ಳಿ ಅಧ್ಯಕ್ಷತೆ ವಹಿಸಿ, ‘ಸಾಹಿತ್ಯಕ್ಕೆ ಓದುಗರು ಇಲ್ಲ ಎನ್ನುವ ಆಕ್ಷೇಪ ಸರಿಯಲ್ಲ. ಓದುವ ವಿಧಾನ ಬದಲಾಗಿದೆ. ಬರೆಯುವವರು ಭಾಷೆಯ ಕುರಿತು ಅಪಾರ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಸಾಹಿತ್ಯದ ವಿಕೃತಿ ಆಗುತ್ತದೆ’ ಎಂದರು.</p>.<p>ಹಿರಿಯ ಸಹಕಾರಿ ಎಸ್.ಎನ್.ಗಾಂವ್ಕರ, ಪ್ರಮುಖರಾದ ಗಣಪತಿ ಮಾನಿಗದ್ದೆ ಇದ್ದರು.</p>.<p>ನಿವೃತ್ತ ಪ್ರಾಚಾರ್ಯ ಜಿ.ಕೆ.ಗಾಂವ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಭೂಮಿಯನ್ನು ನಿರ್ಲಕ್ಷಿಸಿ ಯಾವುದೇ ಕೆಲಸ ಮಾಡುವುದು ಸರಿಯಾದ ಕ್ರಮವಲ್ಲ. ಕೃಷಿ ಭೂಮಿಯನ್ನು ಉತ್ತಮವಾಗಿ ಪೋಷಿಸುವ ಜೊತೆ ಜೊತೆಗೆ ಉಳಿದ ಕೆಲಸ ಮಾಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ‘ಗ್ರಾಮೀಣ ಜನರ ಬದುಕು ರೂಪಾಂತರಕ್ಕೆ ಒಳಗಾಗುತ್ತಿದೆ. ರೂಪಾಂತರವಿಲ್ಲದೇ ವಿಕಾಸ ಇಲ್ಲ. ಹಾಗಾಗಿ ಈ ರೂಪಾಂತರವನ್ನು ಸ್ವೀಕರಿಸಿ ನಾವು ಬದಲಾದ ಕಾಲಘಟ್ಟಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾದದ್ದು ಅಗತ್ಯ’ ಎಂದು ಕತೆಗಾರ ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.</p>.<p>ಬೀಗಾರಿನ ಕಲ್ಮನೆ ಆವಾರದಲ್ಲಿ ಭಾನುವಾರ ನಡೆದ ಮನೆಯಂಗಳದಲ್ಲಿ ಸಾಹಿತ್ಯ ಚಿಂತನ ಕಾರ್ಯಕ್ರಮದ ಮೂರನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.</p>.<p>‘ಇಂದಿನ ಸಂಪರ್ಕ ಯುಗ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳನ್ನು ಕ್ಷೀಣಿಸುತ್ತಿದೆ. ಸಾಹಿತ್ಯದಲ್ಲಿ ಅಂತಿಮವಾಗಿ ಮುಖ್ಯವಾದದ್ದು ಸಂಬಂಧ. ಹಾಗಾಗಿ ಸಂಬಂಧ ಬೆಳೆಯುವಂತಹ ಕಾರ್ಯಕ್ರಮವೂ ಅಷ್ಷೇ ಮುಖ್ಯ. ಹುಟ್ಟು, ಮದುವೆ, ಸಾವು ಈ ಮೂರು ಸಂಗತಿಗಳ ಜೀವಂತ ಅನುಭವ ಈ ತಲೆಮಾರಿನ ಜನರಿಗೆ ಆಗುತ್ತಿಲ್ಲ. ಬದುಕಿನಲ್ಲಿ ಪರಸ್ಪರ ಅವಲಂಬನೆ ಕಡಿಮೆಯಾಗುತ್ತಿದೆ. ಸಹಜ ಜೀವನಕ್ರಮ ತಪ್ಪುತ್ತಿದೆ’ ಎಂದರು.</p>.<p>ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ‘ಕಲೆ, ಸಾಹಿತ್ಯ, ಸಂಗೀತ ಇವೆಲ್ಲ ದೇಶದ ಆಧಾರ ಸ್ತಂಭಗಳು. ಇವುಗಳ ಕುರಿತು ಶ್ರದ್ಧೆ ಅಗತ್ಯ. ಇಂದು ಸರಿಯಾಗಿ ಅರಿತುಕೊಳ್ಳದೇ ಎಲ್ಲವನ್ನೂ ಟೀಕಿಸುವ ಮನೋಧರ್ಮ ಬೆಳೆಯುತ್ತಿದೆ’ ಎಂದು ಬೇಸರಿಸಿದರು.</p>.<p>ಪ್ರಮುಖರಾದ ದತ್ತಾತ್ರೇಯ ಭಟ್ಟ ಕಣ್ಣಿಪಾಲ, ಗಣಪತಿ ಮೆಣಸುಮನೆ, ನಾರಾಯಣ ಹೆಗಡೆ ಅವರು ಹರಿಪ್ರಕಾಶ ಕೋಣೆಮನೆಯವರ ಕೃತಿಯನ್ನು ಅವಲೋಕಿಸಿದರು.</p>.<p>ತಾಳಮದ್ದಲೆ ಅರ್ಥದಾರಿ ಎಂ.ಎನ್.ಹೆಗಡೆ ಹಳವಳ್ಳಿ ಅಧ್ಯಕ್ಷತೆ ವಹಿಸಿ, ‘ಸಾಹಿತ್ಯಕ್ಕೆ ಓದುಗರು ಇಲ್ಲ ಎನ್ನುವ ಆಕ್ಷೇಪ ಸರಿಯಲ್ಲ. ಓದುವ ವಿಧಾನ ಬದಲಾಗಿದೆ. ಬರೆಯುವವರು ಭಾಷೆಯ ಕುರಿತು ಅಪಾರ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಸಾಹಿತ್ಯದ ವಿಕೃತಿ ಆಗುತ್ತದೆ’ ಎಂದರು.</p>.<p>ಹಿರಿಯ ಸಹಕಾರಿ ಎಸ್.ಎನ್.ಗಾಂವ್ಕರ, ಪ್ರಮುಖರಾದ ಗಣಪತಿ ಮಾನಿಗದ್ದೆ ಇದ್ದರು.</p>.<p>ನಿವೃತ್ತ ಪ್ರಾಚಾರ್ಯ ಜಿ.ಕೆ.ಗಾಂವ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಭೂಮಿಯನ್ನು ನಿರ್ಲಕ್ಷಿಸಿ ಯಾವುದೇ ಕೆಲಸ ಮಾಡುವುದು ಸರಿಯಾದ ಕ್ರಮವಲ್ಲ. ಕೃಷಿ ಭೂಮಿಯನ್ನು ಉತ್ತಮವಾಗಿ ಪೋಷಿಸುವ ಜೊತೆ ಜೊತೆಗೆ ಉಳಿದ ಕೆಲಸ ಮಾಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>