ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅಳವಡಿಸಲಾಗಿದ್ದ ಸರ್ಕಾರದ ಸಾಧನೆ ಬ್ಯಾನರ್ ಅನ್ನು ತೆಗೆಯದೆ, ತಿರುವಿ ಹಾಕಲಾಗಿದೆ. ತಾಲ್ಲೂಕು ಪಂಚಾಯಿತಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಲೋಕಜನಶಕ್ತಿ ಪಕ್ಷದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ದಾನಕೈ ಆಗ್ರಹಿಸಿದ್ದಾರೆ. ಕೆಲವು ಕಡೆ ಜಾತ್ರೆಯ ಪ್ರಯುಕ್ತ ಕಟ್ಟಿದ್ದ ಕೇಸರಿ ಬಣ್ಣದ ಪರಿಕರಗಳನ್ನು ಕಿತ್ತುಹಾಕಿದ್ದು, ಕೆಲ ಯುವಕರು ಪ್ರತಿರೋಧಿಸಿದರು. ಚುನಾವಣೆ ನಂತರದಲ್ಲಿ ಕಟ್ಟಿಕೊಳ್ಳುವಂತೆ ಮುಖ್ಯಾಧಿಕಾರಿ ಸಮಾಧಾನ ಪಡಿಸಿದ ನಂತರ ಯುವಕರು ಮೌನವಹಿಸಿದರು.