ಕೊಟ್ಟೂರಿನ ಚರಣರಾಜ್ (33) ಹಾಗೂ ಎಂ. ಆರ್. ಹಾಲೇಶ್ (34) ಮೃತರು. ಚರಣರಾಜ್ ಹಾಗೂ ಹಾಲೇಶ್ ಅವರು ತಮ್ಮ ಐದು ಜನ ಸ್ನೇಹಿತರೊಂದಿಗೆ ಭಾನುವಾರ ಜಲಾಶಯ ವೀಕ್ಷಣೆಗೆ ಹೋಗಿ ಈಜಾಟಕ್ಕೆ ಇಳಿದಿದ್ದಾರೆ. ಅನಂತರ ಇಬ್ಬರು ನಾಪತ್ತೆಯಾಗಿದ್ದಾರೆ. ಸ್ನೇಹಿತರು ಬಂದು ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಸಂಜೆ ಹುಡುಕಾಟ ನಡೆಸಿದ್ದಾರೆ. ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅವರು ಸೋಮವಾರ ಬೆಳಿಗ್ಗೆ ದಾವಣಗೆರೆಯಿಂದ ಯಾಂತ್ರೀಕೃತ ದೋಣಿ ತರಿಸಿ, ತೀವ್ರ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.