ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಜೆಡಿಎಸ್ ಅಭ್ಯರ್ಥಿಗೆ ತಾಂಡಾ ನಿವಾಸಿಗಳಿಂದ ನಾಲ್ಕು ಲಕ್ಷ ದೇಣಿಗೆ

Published 1 ಮೇ 2023, 5:54 IST
Last Updated 1 ಮೇ 2023, 5:54 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.‌ನೇಮರಾಜ ನಾಯ್ಕ ಅವರಿಗೆ ರಾಯರಾಳ್ ತಾಂಡಾದವರು ಚುನಾವಣೆ ಖರ್ಚಿಗೆ ₹4 ಲಕ್ಷದ ಒಂದು ಸಾವಿರ ದೇಣಿಗೆ ನೀಡಿದರು.

ಭಾನುವಾರ ರಾತ್ರಿ ತಾಂಡಾಕ್ಕೆ ಪ್ರಚಾರಕ್ಕೆ‌ ತೆರಳಿದ ನೇಮರಾಜ ನಾಯ್ಕ ಅವರಿಗೆ ಗ್ರಾಮಸ್ಥರು ನಗದು ಹಣ ನೀಡಿ ಬೆಂಬಲ ಸೂಚಿಸಿದರು.

ಮಾಜಿಶಾಸಕ ನೇಮರಾಜ ನಾಯ್ಕ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅವರು ಜೆಡಿಎಸ್ ನಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸ್ವಾಭಿಮಾನದ ಹೆಸರಲ್ಲಿ ಮತಯಾಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT