‘ಪಟ್ಟಣದ ವಿನಾಯಕ ಶಾಲೆಯಲ್ಲಿ ಎಲ್.ಕೆ.ಜಿ.ಯಲ್ಲಿ ಓದುತ್ತಿದ್ದ ಮೊಮ್ಮಗನನ್ನು ಕೆರೆದುಕೊಂಡು ಭೀಮಪ್ಪ ಸ್ವಗ್ರಾಮ ನಾಗರಹುಣೆಸೆಗೆ ಬೈಕಿನಲ್ಲಿ ಹೊರಟಿದ್ದರು. ದಾರಿಯಲ್ಲಿ ಜೊತೆಯಾದ ಅದೇ ಗ್ರಾಮದ ಪಿ.ಆರ್. ವಿನಯ್ ಕುಮಾರ್ ಅವರನ್ನು ಹತ್ತಿಸಿಕೊಂಡು ಹೋಗುತ್ತಿದ್ದಾಗ ಕಕ್ಕುಪ್ಪಿ ಗ್ರಾಮದ ಬಳಿ ಗುಡೇಕೋಟೆ ಕಡೆಯಿಂದ ಅತಿ ವೇಗದಲ್ಲಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಆದಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭೀಮಪ್ಪ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತರಾಗಿದ್ದಾರೆ. ವಿನಯ್ ಕುಮಾರ್, ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.