ಗೌರಿ–ಗಣೇಶ ಹಬ್ಬಕ್ಕೆ ಪೂಜಾ ವಸ್ತುಗಳ ಖರೀದಿಗೆ ಜನ ಮಂಗಳವಾರ ಬೆಳಿಗ್ಗೆ ಮಾರುಕಟ್ಟೆಗೆ ಬರಬೇಕಿತ್ತು. ಆದರೆ, ವರುಣನ ಆರ್ಭಟದಿಂದ ಅವರ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಸಂಜೆಯೂ ಕೆಲಹೊತ್ತು ಮಳೆ ತನ್ನ ಪ್ರತಾಪ ತೋರಿಸಿತು. ಆದರೆ, ಹಬ್ಬದ ಸಂಭ್ರಮ ಜನರನ್ನು ಕುಂದಿಸಲಿಲ್ಲ. ಜನ ಕೊಡೆಗಳನ್ನು ಹಿಡಿದುಕೊಂಡು ಹೊರಗೆ ಬಂದು, ಗಣಪನ ಮೂರ್ತಿ, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.ಜಿಲ್ಲಾಡಳಿತವು ಆ. 31ರಿಂದ ಸೆ. 10ರ ವರೆಗೆ ಮದ್ಯ ಮಾರಾಟ, ಸಾಗಾಟ ನಿಷೇಧಿಸಿ ಆದೇಶಿಸಿದೆ.