ಇಲಾಖೆಯ ಕೆಲಸದ ಜತೆಗೆ ಹೆಚ್ಚುವರಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸರ್ವೇ, ಬಿಪಿಎಲ್, ಆರ್ಸಿಎಚ್ ಕಾರ್ಡ್ ಸರ್ವೇ, ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ, ಸ್ತ್ರೀಶಕ್ತಿ, ಚುನಾವಣೆ ಸೇರಿದಂತೆ ಇತರೆ ಕೆಲಸ ಮಾಡಿದ್ದಾರೆ. ಈಗ ಬೇಡಿಕೆ ಈಡೇರಿಸದಿದ್ದಾರೆ ಈ ಎಲ್ಲ ಕೆಲಸ ಬಹಿಷ್ಕರಿಸಲಾಗುವುದು. ಮಿನಿ ಅಂಗನವಾಡಿಗಳಲ್ಲಿ ಸಹಾಯಕಿಯರನ್ನು ಕೊಡುವವರೆಗೆ ಅಡುಗೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.