ಗಾಂಧಿ ವಾಸವಿದ್ದ ಕೊಠಡಿಯನ್ನು ಜನ ಭಕ್ತಿಭಾವ, ಗೌರವದಿಂದ ಕಾಣುತ್ತಾರೆ. ಯಾರೇ ಒಳ ಹೋಗಬೇಕಾದರೆ ಚಪ್ಪಲಿ ಬಿಟ್ಟು, ಪಾದಗಳನ್ನು ಸ್ವಚ್ಛ ಮಾಡಿಕೊಂಡು ಹೋಗುತ್ತಾರೆ. ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಸ್ಥಳೀಯ
ಇಜಾರಿ ಶಿರಸಪ್ಪ, ಇಜಾರಿ ಬೊಮ್ಮವ್ವ, ಇಜಾರಿ ಕಮಲಮ್ಮ ಸೇರಿದಂತೆ ಅನೇಕರು ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದ್ದನ್ನು ಜನ ಈಗಲೂ ನೆನೆಯುತ್ತಾರೆ.