‘4ರಿಂದ 5 ವರ್ಷದ ಹೆಣ್ಣು ಕರಡಿ ರಾಣಿಪೇಟೆಗೆ ಬಂದಿತ್ತು. ಬೆಳಗಿನ ಜಾವ ಬಂದದ್ದರಿಂದ ಯಾರು ಎದುರಾಗದ ಕಾರಣ ಕರಡಿ ದಾಳಿ ನಡೆಸಿಲ್ಲ. ವಿಷಯ ತಿಳದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಕರಡಿಯನ್ನು ಸುರಕ್ಷಿತವಾಗಿ ಕಾಡೊಳಗೆ ಬಿಡಲಾಗಿದೆ. ಬಸವನದುರ್ಗ, ಧರ್ಮದಗುಡ್ಡ ಭಾಗದಿಂದ ಕರಡಿ ಬಂದಿರುವ ಸಾಧ್ಯತೆ ಇದೆ. ಆದರೆ, ಹೆಚ್ಚು ಜನವಸತಿ ಪ್ರದೇಶಕ್ಕೆ ಅದು ಹೇಗೆ ಬಂತು ಎನ್ನುವುದು ಗೊತ್ತಾಗಿಲ್ಲ’ ಎಂದು ವಲಯ ಅರಣ್ಯ ಅಧಿಕಾರಿ ಕೆ.ಸಿ. ವಿನಯ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.