ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಸೀತಾರಾಮ ತಾಂಡಾದಲ್ಲಿ ಕರಡಿ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಹೊಸಪೇಟೆ ತಾಲ್ಲೂಕು
Last Updated 7 ಆಗಸ್ಟ್ 2022, 11:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಸೀತಾರಾಮ ತಾಂಡಾದಲ್ಲಿ ಭಾನುವಾರ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಸೀತಾರಾಮ ತಾಂಡಾದ ಹೊರವಲಯದಲ್ಲಿ ಕರಡಿ ಮುಕ್ತವಾಗಿ ಓಡಾಡಿದೆ. ಹೊಲಕ್ಕೆ ತೆರಳುತ್ತಿದ್ದ ಗ್ರಾಮಸ್ಥರು ಕರಡಿ ಕಂಡು ಭಯಭೀತರಾಗಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು.

ಗ್ರಾಮಕ್ಕೆ ಹೊಂದಿಕೊಂಡಂತೆ ಬೆಟ್ಟ, ಗುಡ್ಡ, ಕುರುಚಲು ಕಾಡು ಇದೆ. ದರೋಜಿ ಕರಡಿ ಧಾಮ ಸಮೀಪದಲ್ಲೇ ಇದೆ. ಜನ ಹಾಗೂ ವಾಹನಗಳ ಓಡಾಟ ಕಡಿಮೆ ಇದೆ. ಕುರುಚಲು ಕಾಡು ಇರುವುದರಿಂದ ಕರಡಿ, ಚಿರತೆಗಳಿಗೆ ಇದು ಪ್ರಶಸ್ತ್ಯವಾದ ಸ್ಥಳವಾಗಿದ್ದು, ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT