ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಸೀತಾರಾಮ ತಾಂಡಾದಲ್ಲಿ ಭಾನುವಾರ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಸೀತಾರಾಮ ತಾಂಡಾದ ಹೊರವಲಯದಲ್ಲಿ ಕರಡಿ ಮುಕ್ತವಾಗಿ ಓಡಾಡಿದೆ. ಹೊಲಕ್ಕೆ ತೆರಳುತ್ತಿದ್ದ ಗ್ರಾಮಸ್ಥರು ಕರಡಿ ಕಂಡು ಭಯಭೀತರಾಗಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಗ್ರಾಮಕ್ಕೆ ಹೊಂದಿಕೊಂಡಂತೆ ಬೆಟ್ಟ, ಗುಡ್ಡ, ಕುರುಚಲು ಕಾಡು ಇದೆ. ದರೋಜಿ ಕರಡಿ ಧಾಮ ಸಮೀಪದಲ್ಲೇ ಇದೆ. ಜನ ಹಾಗೂ ವಾಹನಗಳ ಓಡಾಟ ಕಡಿಮೆ ಇದೆ. ಕುರುಚಲು ಕಾಡು ಇರುವುದರಿಂದ ಕರಡಿ, ಚಿರತೆಗಳಿಗೆ ಇದು ಪ್ರಶಸ್ತ್ಯವಾದ ಸ್ಥಳವಾಗಿದ್ದು, ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ.