ಹರಪನಹಳ್ಳಿ (ವಿಜಯನಗರ ಜಿಲ್ಲೆ) : ತಾಲ್ಲೂಕಿನ ಕೆ.ಕಲ್ಲಹಳ್ಳಿ ಕ್ರಾಸ್ ಸಮೀಪ ಕಾರೊಂದು ಭಾನುವಾರ ಪಲ್ಟಿಯಾಗಿ ಐದು ವರ್ಷದ ಬಾಲಕ ಸಾವನ್ನಪ್ಪಿ, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಜನಿತ್ ಮೃತ ಬಾಲಕ. ನೈತಿಕ್, ವೆಂಕಟೇಶ್, ಪ್ರದೀಪ, ಶಿವಕುಮಾರ ಗಾಯಗೊಂಡವರು. ಎಲ್ಲರೂ ದಾವಣಗೆರೆಯ ವಿನೋಬ ನಗರದ ಒಂದೇ ಕುಟುಂಬಕ್ಕೆ ಸೇರಿದವರು.
ದಾವಣಗೆರೆಯಿಂದ ಮುಂಡರಗಿಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕೆಎ 17, ಎಂ.ಬಿ.2340 ಸಂಖ್ಯೆ ಕಾರು ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.