ಹೊಸಪೇಟೆ (ವಿಜಯನಗರ): ಇಲ್ಲಿನ ಎಂ.ಪಿ. ಪ್ರಕಾಶ್ ನಗರದಲ್ಲಿ ಸಾರ್ವಜನಿಕ ರಸ್ತೆ ಮೇಲಿನ ನಿರ್ಮಾಣ ಹಂತದ ಕಟ್ಟಡವನ್ನು ಶನಿವಾರ ನಗರಸಭೆ ತೆರವುಗೊಳಿಸಿತು.
ನಗರಸಭೆ ಪೌರಾಯುಕ್ತ ಮನೋಹರ್ ಸಮ್ಮುಖದಲ್ಲಿ ಜೆ.ಸಿ.ಬಿ ಮೂಲಕ ತೆರವುಗೊಳಿಸಲಾಯಿತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
'ಸಾರ್ವಜನಿಕ ರಸ್ತೆ ಮೇಲೆ ಯಾರೋ ಅಪರಿಚಿತರು ಕಟ್ಟಡ ನಿರ್ಮಿಸಿದ್ದರು. ಅದರ ವಾರಸುದಾರರು ಯಾರಾದರೂ ಇದ್ದರೆ ಸಂಪರ್ಕಿಸುವಂತೆ ನಗರಸಭೆಯಿಂದ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗಿತ್ತು. ನೋಟಿಸ್ ಅವಧಿ ಮುಗಿದಿದ್ದರಿಂದ ಕಟ್ಟಡ ತೆರವುಗೊಳಿಸಲಾಗಿದೆ' ಎಂದು ಮನೋಹರ್ ತಿಳಿಸಿದರು.