ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಉಭಯ ಪಕ್ಷಗಳ ಮುಖಂಡರ ಪ್ರಚೋದನಕಾರಿ ಹೇಳಿಕೆಗಳಿಂದ ಜನರಲ್ಲಿ ಅಸಹ್ಯ ಹುಟ್ಟಿದೆ. ಪಕ್ಷಗಳು ಒಗ್ಗಟ್ಟಾಗಿ ದೇಶ ಮತ್ತು ರಾಜ್ಯದ ರಕ್ಷಣೆ ಕುರಿತು ಹೇಳಿಕೆ ನೀಡಬೇಕು. ಹಿಂದೂ–ಮುಸ್ಲಿಮರು ಹಳ್ಳಿಗಳಲ್ಲಿ ಈಗಲೂ ಭಾವೈಕ್ಯತೆಯಿಂದ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಸುಖಾಸುಮ್ಮನೆ ರಾಜಕೀಯ ಲಾಭಕ್ಕಾಗಿ ಕೋಮು ಪ್ರಚೋದನೆ ಹೇಳಿಕೆ ಕೊಡಬಾರದು’ ಎಂದು ತಾಕೀತು ಮಾಡಿದರು.