ಸನ್ಮಾನ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಹಿರಿಯ ವಿದ್ವಾಂಸರೊಂದಿಗೆ ಒಡನಾಟ, ಸಾಹಿತ್ಯ ಚಿಂತನೆ, ಚರ್ಚೆ, ಆಡಳಿತ ಅನುಭವ ಇದೆಲ್ಲ ನಾನು ಕನ್ನಡ ವಿಶ್ವವಿದ್ಯಾಲಯದಿಂದ ಪಡೆದುಕೊಂಡ ಅನುಭವ. ನಿವೃತ್ತಿಯ ನಂತರವೂ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರ ವಿದ್ವತ್ತು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ’ ಎಂದು ಹೇಳಿದರು.