‘ಪಂಜಾಬ್, ದೆಹಲಿ, ಹರಿಯಾಣ ಬಿಟ್ಟರೆ ಯಾವ ರಾಜ್ಯದಲ್ಲೂ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿಲ್ಲ. ವಿರೋಧ ಪಕ್ಷದವರು ಮಸೂದೆಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ, ಒಂದು ದಿನ ಹೊರ ಬರಬೇಕಾದರೆ ಮನೆಗೆ, ಹೊಲಕ್ಕೆ, ಜಾನುವಾರುಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಆದರೆ, ಮೂರು ತಿಂಗಳಾದರೂ ಕೃಷಿ ಕೆಲಸವನ್ನು ಮಾಡದೇ ಹೋರಾಟ ಮಾಡುತ್ತಿದ್ದಾರೆ. ಅಂದರೆ ಅವರು ರೈತರಲ್ಲ’ ಎಂದರು.