<p><strong>ಹೊಸಪೇಟೆ (ವಿಜಯನಗರ):</strong> ರಾಜ್ಯದಲ್ಲಿ ರೈತರು ಹಲವು ಬಗೆಯಲ್ಲಿ ಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಸ್ಪಂದಿಸುತ್ತಿಲ್ಲ. ಇದಕ್ಕಾಗಿ ಡಿ.16ರಂದು ಎಲ್ಲಾ 21 ರೈತಸಂಘಗಳನ್ನು ಒಳಗೊಂಡ ರೈತರ ಬೃಹತ್ ದಂಡು ಅಧಿವೇಶನ ನಡೆಯುವ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದೆ.</p><p>ರೈತ ಸಂಘಗಳನ್ನು ಏಕೀಕರಣಗೊಳಿಸುವ ಕಾರ್ಯದಲ್ಲಿ ತೊಡಗಿರುವ ಪಚ್ಚೆ ನಂಜುಂಡಸ್ವಾಮಿ ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ಭಾರಿ ಶಕ್ತಿ ಇದೆ, ಇದುವರೆಗೆ ಅವರ ಹೋರಾಟ ಚದುರಿ ಹೋಗುತ್ತಿತ್ತು. ಆದರೆ ಈ ಬಾರಿ ಎಲ್ಲ ರೈತಸಂಘಗಳನ್ನು ಒಗ್ಗೂಡಿಸಿ ವಿಧಾನಮಂಡಲ ಕಲಾಪದ ವೇಳೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯಲಿದೆ ಎಂದರು.</p><p>‘ರಾಜ್ಯ ಸರ್ಕಾರ ತಕ್ಷಣ ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕು, ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದೆ ತಿದ್ದುಪಡಿಯಷ್ಟೇ ಅಲ್ಲ, ಅದರ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು, ಕುಲಾಂತರಿ ಮುಕ್ತ ರಾಜ್ಯ ನಿರ್ಮಿಸಬೇಕು, ನಬಾರ್ಡ್ ನೀಡುವ ಅನುದಾನ ಕಡಿತಗೊಳ್ಳಬಾರದು, ಭತ್ತಕ್ಕೆ ಕ್ವಿಂಟಲ್ಗೆ ₹3,500, ಕಬ್ಬಿಗೆ ಟನ್ಗೆ ₹5,500 ದರ ನಿಗದಿಪಡಿಸಬೇಕು, ಹೊಸಪೇಟೆ ಸುತ್ತಮುತ್ತ ಎರಡು ಸಕ್ಕರೆ ಕಾರ್ಖಾನೆ ನಿರ್ಮಿಸಬೇಕು, ವಿಜಯನಗರ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು, ಇಂತಹ ಕೇಂದ್ರ ನಿರಂತರವಾಗಿರಬೇಕು ಮೊದಲಾದ 28 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>1 ಲಕ್ಷ ರೈತರ ನಿರೀಕ್ಷೆ:</strong> ‘ಇದುವರೆಗೆ ರೈತರಲ್ಲಿ ಒಗ್ಗಟ್ಟು ಇರಲಿಲ್ಲ, ಅದನ್ನೇ ಸರ್ಕಾರ ಬಂಡವಾಳ ಮಾಡಿಕೊಂಡು ರೈತರ ಅಹವಾಲು ಕೇಳಲಾರದಂತಹ ಸ್ಥಿತಿ ಇತ್ತು. ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ. ಸಂಘಟನೆಗಳನ್ನು ವಿಲೀನಗೊಳಿಸುವುದಿಲ್ಲ, ಪ್ರಾದೇಶಿಕ ಭಿನ್ನತೆಗೆ ತಕ್ಕಂತೆ ಸಂಘಟನೆಗಳು ಇರಬೇಕು, ಆದರೆ ಎಲ್ಲಾ ಸಂಘಟನೆಗಳನ್ನು ಆಗಾಗ ಕೆಲವು ನಿರ್ದಿಷ್ಟ ಕಾರಣಕ್ಕೆ ಒಗ್ಗೂಡಿಸಿ ಹೋರಾಟ ನಡೆಸುವ ಪ್ರಾಯೋಗಿಕ ಚಿಂತನೆ ಡಿ.16ರಂದು ಜಾರಿಗೆ ಬರಲಿದೆ. ಅಂದು 1 ಲಕ್ಷ ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ದರ್ಶನ್ ಪುಟ್ಟಣ್ಣಯ್ಯ, ಮಹಿಮಾ ಪಟೇಲ್, ಮಾಧವ ರೆಡ್ಡಿ, ಪುರುಷೋತ್ತಮ ಸಹಿತ ಹಲವರು ಜತೆಗಿರಲಿದ್ದಾರೆ’ ಎಂದು ಪಚ್ಚೆ ನಂಜುಂಡಸ್ವಾಮಿ ಹೇಳಿದರು.</p><p>ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಶರಣಪ್ಪ ದೊಡ್ಮನಿ ಮಾತನಾಡಿ, ರೈತ ಸಂಘದ ರೂವಾರಿಯಾಗಿದ್ದ ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ಅವರ ಏಕೀಕರಣ ಯತ್ನ ಯಶಸ್ವಿಯಾಗುವ ವಿಶ್ವಾಸ ಇದೆ, ಏಕೆಂದರೆ ಅವರ ಇಡೀ ಕುಟುಂಬ ರೈತರ ಬಗೆಗೆ ಅಪಾರ ಕಾಳಜಿ ಹೊಂದಿದೆ, ಇದೇ ಮೊದಲ ಬಾರಿಗೆ ಇಂತಹ ಯತ್ನ ನಡೆಯುತ್ತಿದೆ ಎಂದರು.</p><p>ವಿಜಯನಗರ ಜಿಲ್ಲೆಯಲ್ಲಿರುವ ಎಲ್ಲ ರೈತ ಸಂಘಗಳನ್ನು ಸಂಪರ್ಕಿಸಿ, ಅವರನ್ನು ವಿಶ್ವಾಸಕ್ಕೆ ಪಡೆಯಲಾಗುವುದು. ಈ ಜಿಲ್ಲೆಯಿಂದ ಒಂದು ಸಾವಿರಕ್ಕೂ ಅಧಿಕ ರೈತರು ಬೆಳಗಾವಿಗೆ ಬರುವ ನಿರೀಕ್ಷೆ ಇದೆ ಎಂದರು.</p><p>ಮೈಸೂರಿನ ವಿದ್ಯಾಸಾಗರ್, ಕೆ.ಅಮ್ಮಣ್ಣ, ಬಿ.ಎಂ.ಹುಲುಗಪ್ಪ. ಎಂ.ಎನ್.ಕುಕನೂರು, ಸತೀಶ್, ಬಿ.ನಾಗರಾಜ್ ಇದ್ದರು.</p>.<blockquote>ರೈತ ಸಂಘಗಳ ವಿಲೀನ ಅಲ್ಲ, ಏಕೀಕರಣ ಮುಂದೆ ಆಗಾಗ ಇಂತಹ ಜಂಟಿ ಹೋರಾಟ ತಿಂಗಳಿಂದೀಚೆಗೆ ಏಕೀಕರಣ ಯತ್ನಕ್ಕೆ ವೇಗ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ರಾಜ್ಯದಲ್ಲಿ ರೈತರು ಹಲವು ಬಗೆಯಲ್ಲಿ ಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಸ್ಪಂದಿಸುತ್ತಿಲ್ಲ. ಇದಕ್ಕಾಗಿ ಡಿ.16ರಂದು ಎಲ್ಲಾ 21 ರೈತಸಂಘಗಳನ್ನು ಒಳಗೊಂಡ ರೈತರ ಬೃಹತ್ ದಂಡು ಅಧಿವೇಶನ ನಡೆಯುವ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದೆ.</p><p>ರೈತ ಸಂಘಗಳನ್ನು ಏಕೀಕರಣಗೊಳಿಸುವ ಕಾರ್ಯದಲ್ಲಿ ತೊಡಗಿರುವ ಪಚ್ಚೆ ನಂಜುಂಡಸ್ವಾಮಿ ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ಭಾರಿ ಶಕ್ತಿ ಇದೆ, ಇದುವರೆಗೆ ಅವರ ಹೋರಾಟ ಚದುರಿ ಹೋಗುತ್ತಿತ್ತು. ಆದರೆ ಈ ಬಾರಿ ಎಲ್ಲ ರೈತಸಂಘಗಳನ್ನು ಒಗ್ಗೂಡಿಸಿ ವಿಧಾನಮಂಡಲ ಕಲಾಪದ ವೇಳೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯಲಿದೆ ಎಂದರು.</p><p>‘ರಾಜ್ಯ ಸರ್ಕಾರ ತಕ್ಷಣ ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕು, ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದೆ ತಿದ್ದುಪಡಿಯಷ್ಟೇ ಅಲ್ಲ, ಅದರ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು, ಕುಲಾಂತರಿ ಮುಕ್ತ ರಾಜ್ಯ ನಿರ್ಮಿಸಬೇಕು, ನಬಾರ್ಡ್ ನೀಡುವ ಅನುದಾನ ಕಡಿತಗೊಳ್ಳಬಾರದು, ಭತ್ತಕ್ಕೆ ಕ್ವಿಂಟಲ್ಗೆ ₹3,500, ಕಬ್ಬಿಗೆ ಟನ್ಗೆ ₹5,500 ದರ ನಿಗದಿಪಡಿಸಬೇಕು, ಹೊಸಪೇಟೆ ಸುತ್ತಮುತ್ತ ಎರಡು ಸಕ್ಕರೆ ಕಾರ್ಖಾನೆ ನಿರ್ಮಿಸಬೇಕು, ವಿಜಯನಗರ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು, ಇಂತಹ ಕೇಂದ್ರ ನಿರಂತರವಾಗಿರಬೇಕು ಮೊದಲಾದ 28 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>1 ಲಕ್ಷ ರೈತರ ನಿರೀಕ್ಷೆ:</strong> ‘ಇದುವರೆಗೆ ರೈತರಲ್ಲಿ ಒಗ್ಗಟ್ಟು ಇರಲಿಲ್ಲ, ಅದನ್ನೇ ಸರ್ಕಾರ ಬಂಡವಾಳ ಮಾಡಿಕೊಂಡು ರೈತರ ಅಹವಾಲು ಕೇಳಲಾರದಂತಹ ಸ್ಥಿತಿ ಇತ್ತು. ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ. ಸಂಘಟನೆಗಳನ್ನು ವಿಲೀನಗೊಳಿಸುವುದಿಲ್ಲ, ಪ್ರಾದೇಶಿಕ ಭಿನ್ನತೆಗೆ ತಕ್ಕಂತೆ ಸಂಘಟನೆಗಳು ಇರಬೇಕು, ಆದರೆ ಎಲ್ಲಾ ಸಂಘಟನೆಗಳನ್ನು ಆಗಾಗ ಕೆಲವು ನಿರ್ದಿಷ್ಟ ಕಾರಣಕ್ಕೆ ಒಗ್ಗೂಡಿಸಿ ಹೋರಾಟ ನಡೆಸುವ ಪ್ರಾಯೋಗಿಕ ಚಿಂತನೆ ಡಿ.16ರಂದು ಜಾರಿಗೆ ಬರಲಿದೆ. ಅಂದು 1 ಲಕ್ಷ ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ದರ್ಶನ್ ಪುಟ್ಟಣ್ಣಯ್ಯ, ಮಹಿಮಾ ಪಟೇಲ್, ಮಾಧವ ರೆಡ್ಡಿ, ಪುರುಷೋತ್ತಮ ಸಹಿತ ಹಲವರು ಜತೆಗಿರಲಿದ್ದಾರೆ’ ಎಂದು ಪಚ್ಚೆ ನಂಜುಂಡಸ್ವಾಮಿ ಹೇಳಿದರು.</p><p>ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಶರಣಪ್ಪ ದೊಡ್ಮನಿ ಮಾತನಾಡಿ, ರೈತ ಸಂಘದ ರೂವಾರಿಯಾಗಿದ್ದ ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ಅವರ ಏಕೀಕರಣ ಯತ್ನ ಯಶಸ್ವಿಯಾಗುವ ವಿಶ್ವಾಸ ಇದೆ, ಏಕೆಂದರೆ ಅವರ ಇಡೀ ಕುಟುಂಬ ರೈತರ ಬಗೆಗೆ ಅಪಾರ ಕಾಳಜಿ ಹೊಂದಿದೆ, ಇದೇ ಮೊದಲ ಬಾರಿಗೆ ಇಂತಹ ಯತ್ನ ನಡೆಯುತ್ತಿದೆ ಎಂದರು.</p><p>ವಿಜಯನಗರ ಜಿಲ್ಲೆಯಲ್ಲಿರುವ ಎಲ್ಲ ರೈತ ಸಂಘಗಳನ್ನು ಸಂಪರ್ಕಿಸಿ, ಅವರನ್ನು ವಿಶ್ವಾಸಕ್ಕೆ ಪಡೆಯಲಾಗುವುದು. ಈ ಜಿಲ್ಲೆಯಿಂದ ಒಂದು ಸಾವಿರಕ್ಕೂ ಅಧಿಕ ರೈತರು ಬೆಳಗಾವಿಗೆ ಬರುವ ನಿರೀಕ್ಷೆ ಇದೆ ಎಂದರು.</p><p>ಮೈಸೂರಿನ ವಿದ್ಯಾಸಾಗರ್, ಕೆ.ಅಮ್ಮಣ್ಣ, ಬಿ.ಎಂ.ಹುಲುಗಪ್ಪ. ಎಂ.ಎನ್.ಕುಕನೂರು, ಸತೀಶ್, ಬಿ.ನಾಗರಾಜ್ ಇದ್ದರು.</p>.<blockquote>ರೈತ ಸಂಘಗಳ ವಿಲೀನ ಅಲ್ಲ, ಏಕೀಕರಣ ಮುಂದೆ ಆಗಾಗ ಇಂತಹ ಜಂಟಿ ಹೋರಾಟ ತಿಂಗಳಿಂದೀಚೆಗೆ ಏಕೀಕರಣ ಯತ್ನಕ್ಕೆ ವೇಗ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>