ಯುಗಾದಿ ಮಾರನೇ ದಿನ ಬೇಟೆಯಾಡುವ ಸಂಪ್ರದಾಯ ವಾಲ್ಮೀಕಿ ನಾಯಕರಲ್ಲಿದೆ. ಬೇಟೆಯಾಡಿದ ಪ್ರಾಣಿ, ಪಕ್ಷಿಗಳನ್ನು ಮೆರವಣಿಗೆ ಮಾಡಿ, ಆಯುಧಗಳಿಗೆಚಿತ್ರಕೇರಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ.ಅರಣ್ಯ ಇಲಾಖೆಯು ಅರಣ್ಯದಲ್ಲಿ ಬೇಟೆಯಾಡುವುದನ್ನು ಹಿಂದೆಯೇ ನಿರ್ಬಂಧಿಸಿದೆ. ಆದರೂ, ಭಾನುವಾರ ಇಲ್ಲಿನ ಚಿತ್ರಕೇರಿಯಲ್ಲಿ, ಬೇಟೆಯಾಡಿದ ಮೊಲ, ಕೌಜುಗ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳನ್ನು ಹಿಡಿದಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದರು. ಇದರಲ್ಲಿ ಕತ್ತಿ, ಲಾಂಗ್ ಹಿಡಿದು ಮಕ್ಕಳೊಂದಿಗೆ ಸಮು
ದಾಯದ ಹಲವರು ಭಾಗವಹಿಸಿದ್ದರು.