ಆರಂಭದಲ್ಲಿ 50,000 ಕ್ಯುಸೆಕ್ಗೂ ಹೆಚ್ಚು ನೀರು ನದಿಗೆ ಹರಿಸಲಾಗುವುದು. ನದಿ ಪಾತ್ರದಲ್ಲಿ ಜನರು ಜಾನುವಾರುಗಳೊಂದಿಗೆ ತೆರಳಬಾರದು. ತೆಪ್ಪ, ಮೋಟಾರ್ ದೋಣಿಗಳೊಂದಿಗೆ ಸಂಚರಿಸಬಾರದು. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲಾಡಳಿತಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಎಂಜಿನಿಯರ್ ವಿಶ್ವನಾಥ್ ತಿಳಿಸಿದ್ದಾರೆ.