1923, ಜು.1ರಂದು ಚೋರನೂರು ಗ್ರಾಮದಲ್ಲಿ ಜನಿಸಿರುವ ಎಚ್.ಎಂ.ವೀರಭದ್ರಯ್ಯ ಅವರು, 1945ರಲ್ಲಿ ಮದ್ರಾಸ್ ಪ್ರಾಂತ್ಯದ ಹೈಕೋರ್ಟ್ನಲ್ಲಿ ವಕೀಲಿವೃತ್ತಿ ಆರಂಭಿಸಿದ್ದರು. ಮಹಾತ್ಮ ಗಾಂಧೀಜಿ ಅವರ ಹೋರಾಟಗಳಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ’ಯಲ್ಲಿ ಸಕ್ರಿಯರಾಗಿ, ಭೂಗತರಾಗಿ ಅಂಚೆ ಕಚೇರಿ ಧ್ವಂಸ, ಸ್ವಾತಂತ್ರ್ಯ ಹೋರಾಟಗಾರರ ಸಂಘಟನೆ ಚುರುಕುಗೊಳಿಸಿದ್ದರು.