ಗೌರಿ ನೆನಪಿನಲ್ಲಿ ಮೊಂಬತ್ತಿ ಬೆಳಗಿಸಿ, ಮೌನ ಆಚರಿಸಿದರು. ನಂತರ ಘೋಷಣೆಗಳನ್ನು ಕೂಗಿ, ಹತ್ಯೆ ಖಂಡಿಸಿದರು.
‘ದೇಶದಲ್ಲಿ ಪ್ರಭುತ್ವದ ವಿರುದ್ಧ, ಮನುವಾದಿ ಸಿದ್ಧಾಂತದ ವಿರುದ್ಧ ಧ್ವನಿಯೆತ್ತುವವರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುವುದು, ಹತ್ಯೆಗೈಯುವ ಮೂಲಕ ಆರ್.ಎಸ್.ಎಸ್ ಭಯೋತ್ಪಾದನೆ ಮಾಡುತ್ತಿದೆ. ಇವರ ಭಯೋತ್ಪಾದನೆಗೆ ದಾಭೋಲ್ಕರ್, ಪನ್ಸಾರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅಂಥ ಚಿಂತಕರು ಹತ್ಯೆಗೀಡಾದರು. ಅವರ ಜೀವ ಹೋಗಿದೆ ಹೊರತು ಅವರು ಸಿದ್ದಾಂತಗಳು ಇಂದೂ ಅಚ್ಚಳಿಯದೇ ನಮ್ಮ ನಡುವೆ ಉಳಿದಿವೆ’ ಎಂದು ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಗೌಸ್ ಹೇಳಿದರು.