ಹೊಸಪೇಟೆ (ವಿಜಯನಗರ): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮುಷ್ಕರ ಮಂಗಳವಾರ 12ನೇ ದಿನಕ್ಕೆ ಕಾಲಿಟ್ಟಿತು.
ತರಗತಿಗಳನ್ನು ಬಹಿಷ್ಕರಿಸಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಮಂಗಳವಾರ ಪತ್ರ ಚಳವಳಿ ನಡೆಸಿದರು.
‘ಬೆಳಗಾವಿ ಸುವರ್ಣಸೌಧದ ಬಳಿ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಗಮನಹರಿಸಿಲ್ಲ. ಮಲತಾಯಿ ಧೋರಣೆ ತಾಳುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ. ಅತಿಥಿ ಉಪನ್ಯಾಸಕರನ್ನು ನಿರ್ಲಕ್ಷ್ಯಿಸುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಷಣ್ಮುಖಪ್ಪ, ಉಜ್ಜಪ್ಪ, ನಾಗವೇಣಿ ಸೋಸಲೆ, ಮಲ್ಲಿಕಾರ್ಜುನ, ನಾಗಾರ್ಜುನ, ಚಂದ್ರು, ಪುನೀತ್, ಮುರಳೀಧರ್, ಪವನ್ಕುಮಾರ್ ಗೌಡ, ದಂಡಿ ಪದ್ಮಜ, ಸುಷ್ಮಾ, ಕುಸುಮಾ, ಮಂಜುನಾಥ, ಜ್ಯೋತಿ ಇದ್ದರು.