ಅನೇಕ ವೈಶಿಷ್ಟ್ಯತೆಯ ಸಂಗಮ ಹೊಂದಿರುವ ಹಂಪಿಯನ್ನು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿರುವುದು ಸರಿಯಾದ ಕ್ರಮ. ಐತಿಹಾಸಿ, ಧಾರ್ಮಿಕ ದೃಷ್ಟಿಯಿಂದ ಈ ಸ್ಥಳ ಪ್ರಮುಖವಾದುದು. ನಮ್ಮ ಜನ, ಋಷಿ ಮುನಿಗಳು ಎಷ್ಟು ಸಜ್ಜನರಾಗಿದ್ದರು. ಪ್ರಕೃತಿ ಜೊತೆಗೆ ನಮ್ಮ ಸಂಬಂಧ ಹೇಗಿರಬೇಕು ಎನ್ನುವುದು ಇಲ್ಲಿನ ವಾಸ್ತುಶಿಲ್ಪದಿಂದ ಗೊತ್ತಾಗುತ್ತದೆ. ಅವಕಾಶ ಸಿಕ್ಕಾಗಲೆಲ್ಲಾ ನಮ್ಮ ಐತಿಹಾಸಿಕ, ಗೌರವದ ಸಂಕೇತವಾಗಿರುವ ಸ್ಥಳಗಳಿಗೆ ಹೋಗಬೇಕು ಎಂದು ಪ್ರಧಾನಿ ಮೋದಿಯವರು ಹೇಳುತ್ತಿರುತ್ತಾರೆ. ವಿಜಯನಗರ ಶ್ರೀಮಂತ, ಅಭಿವೃದ್ಧಿಯ ಸಾಮ್ರಾಜ್ಯವಾಗಿತ್ತು. ಆ ಅಭಿವೃದ್ಧಿಯ ಕಡೆಗೆ ಈ ದೇಶವನ್ನು ಕೊಂಡೊಯ್ಯುವುದು ನಮ್ಮ ಗುರಿ ಕೂಡ ಹೌದು’ ಎಂದು ಹೇಳಿದರು.