‘ಪ್ರಜಾವಾಣಿ’ ವೆಬ್ಸೈಟಿನಲ್ಲಿ ಪ್ರಕಟಗೊಂಡ ಸುದ್ದಿಯನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ದಾದಾ ಕಲಂದರ್ ಎಂಬುವರು, ‘ಬಿಜೆಪಿಯವರ ಆಡಳಿತದಲ್ಲಿ ಏನೆಲ್ಲಾ ನೋಡಬೇಕಿದೆಯೋ? ಅಲ್ಲಾ ಈ ನಾಡೋಜ ಪ್ರಶಸ್ತಿ ನೀಡಲು ಇರುವ ಮಾನದಂಡಗಳಲ್ಲಿ ಹಣವಂತರು ಎಂಬ ಮಾನದಂಡ ಯಾವಾಗ ಸೇರಿಸಲಾಯಿತು? ನಿಜ ನಾಡೋಜರಾದ ರೈತರು, ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಂದಾಯ ಮಾಡಲಾಗದವರನ್ನೆಲ್ಲ ನಾಡೋಜ ಕೊಟ್ಟು ಗೌರವಿಸುವ ದಾರಿದ್ರ್ಯಕ್ಕೆ ಸಾಕ್ಷಿಯಾಗಬೇಕಾಗಿ ಬಂದದ್ದು ಕನ್ನಡಿಗರ ದೌರ್ಭಾಗ್ಯವೇ ಹೌದು’ ಎಂದು ಬರೆದುಕೊಂಡಿದ್ದಾರೆ.