ಹೊಸಪೇಟೆ (ವಿಜಯನಗರ): ರಸ್ತೆ ನಿರ್ಮಾಣಕ್ಕೆ ಮಣ್ಣು ಕೊಂಡೊಯ್ಯಲು ನೆಲ ಅಗೆಯುತ್ತಿರುವುದರಿಂದ ತಾಲ್ಲೂಕಿನ ಹಂಪಿ ತಳವಾರ ಘಟ್ಟದ ಶಿವ ದೇವಾಲಯ ಸಮೀಪದ ಪುರಾತನ ಕಲ್ಲಿನ ಕೋಟೆ ಗೋಡೆಗೆ ಶನಿವಾರ ಹಾನಿಯಾಗಿದೆ.
ಈ ಪ್ರದೇಶವು ಹಂಪಿಯ ಕೋರ್ ಜೋನ್ ವ್ಯಾಪ್ತಿಗೆ ಬರುತ್ತದೆ. ಆದರೆ, ಹಿಟಾಚಿಯಿಂದ ಮಣ್ಣು ತೆಗೆಯಲಾಗುತ್ತಿದ್ದು, ಕೋಟೆ ಗೋಡೆ ಬಿದ್ದಿದೆ. ನಾಲ್ಕೈದು ಟಿಪ್ಪರ್ಗಳಲ್ಲಿ ಮಣ್ಣು ಸಾಗಿಸಲಾಗುತ್ತಿದೆ. ನೆಲ ಅಗೆದ ಜಾಗದಲ್ಲಿ 25 ಮೀಟರ್ ದೂರದಲ್ಲಿ ಶಿವ ದೇವಾಲಯವಿದ್ದು, ಅದಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ.