ಹೊಸಪೇಟೆ (ವಿಜಯನಗರ): ‘ಹಂಪಿ ಉತ್ಸವ’ ವೀಕ್ಷಣೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಉಚಿತ ಬಸ್ಗಳಿಗೆ ವ್ಯವಸ್ಥೆ ಮಾಡಲಾಗಿದೆ.
ತಾಲ್ಲೂಕಿನ ಕಡ್ಡಿರಾಂಪುರ ಕ್ರಾಸ್ನಿಂದ ಹಂಪಿ ಪರಿಸರದ ವರೆಗೆ ಬಸ್ಸುಗಳು ಸಂಚರಿಸಲಿವೆ. ಹಂಪಿ ಉತ್ಸವ ಮುಗಿಯುವವರೆಗೆ ಈ ಸೌಲಭ್ಯ ಇರಲಿದೆ.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಉಚಿತ ಸಾರಿಗೆಗೆ ಚಾಲನೆ ನೀಡಿದರು. ಅನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಅವರೊಂದಿಗೆ ಕಡ್ಡಿರಾಂಪುರ ಕ್ರಾಸ್ನಿಂದ ಹಂಪಿ ವರೆಗೆ ಜನರೊಂದಿಗೆ ಬಸ್ಸಿನಲ್ಲೇ ಸಂಚರಿಸಿದರು.