<p>ಹರಪನಹಳ್ಳಿ: ‘ಪಕ್ಷಿ ಸಂಕುಲ ಸಂರಕ್ಷಿಸಿದರೆ ಮಾತ್ರ ಪರಿಸರ ಉಳಿಯಲು, ಸಮೃದ್ದಗೊಳಿಸಲು ಸಾಧ್ಯ’ ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ತಿಳಿಸಿದರು.</p>.<p>ನಗರದ ಸಮತಾ ಉದ್ಯಾನದಲ್ಲಿ ಶನಿವಾರ ಜ್ಯೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಲುಮ್ನಿ ಕ್ಲಬ್ (ಜೆಎಸಿ) ಆಯೋಜಿಸಿದ್ದ ಪಕ್ಷಿಗಳಿಗೆ ನೀರು ಕಲ್ಪಿಸುವ ಮಡಕೆ ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಜೆಸಿಐ ಸಂಸ್ಥೆಯಿಂದ ಮರ–ಗಿಡಗಳಲ್ಲಿ ಮಡಕೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾದರಿಯಾಗಿದೆ. ಬೇಸಿಗೆ ಮುಗಿಯುವ ತನಕ ಮಡಕೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕಾಳಜಿವಹಿಸಲು ಸಲಹೆ ನೀಡಿದರು.</p>.<p>ಜೆಎಸಿ ತಾಲ್ಲೂಕು ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಮಾತನಾಡಿ, ‘ಜೆಸಿಐ, ಜೆಎಸಿ ಸಂಸ್ಥೆಯು ಒಂದು ಪಾತ್ರೆ ನೀರು – ನೂರಾರು ಪಕ್ಷಿಗಳಿಗೆ ನೆರವು ಘೋಷಣೆಯೊಂದಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಚಿಕ್ಕ ಪ್ರಯತ್ನ ಮಾಡುತ್ತಿದೆ. 10 ದಿನ ನಡೆಯುವ ಈ ಅಭಿಯಾನದಲ್ಲಿ ತಾಲ್ಲೂಕಿನ ಜನತೆ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ತಮ್ಮ ಮನೆಯ ಸುತ್ತಮುತ್ತ, ಛಾವಣಿ ಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡ ಬಹುದು. ಇದನ್ನು ಮಾಡುವ ಅತ್ಯುತ್ತಮ ಪಕ್ಷಿ ಪ್ರೇಮಿಗಳಿಗೆ ಬಹುಮಾನ ಕೊಡಲಾಗುವುದು’ ಎಂದರು.</p>.<p>ಬಿ.ಎಸ್.ರವಿಶಂಕರ, ವಲಯ ಮಂಡಳಿ ಸಂಸತ್ ಸದಸ್ಯ ವಿಶ್ವನಾಥ, ಪ್ರಸನ್ನಕುಮಾರ ಜೈನ್, ರವೀಂದ್ರ ಅಧಿಕಾರ, ಇರ್ಷಾದ್ ಭಾಷ, ಪ್ರಭಾಕರ, ಶಿವಕುಮಾರ, ಹುಲಿರಾಜ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-25-1318591195</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಪನಹಳ್ಳಿ: ‘ಪಕ್ಷಿ ಸಂಕುಲ ಸಂರಕ್ಷಿಸಿದರೆ ಮಾತ್ರ ಪರಿಸರ ಉಳಿಯಲು, ಸಮೃದ್ದಗೊಳಿಸಲು ಸಾಧ್ಯ’ ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ತಿಳಿಸಿದರು.</p>.<p>ನಗರದ ಸಮತಾ ಉದ್ಯಾನದಲ್ಲಿ ಶನಿವಾರ ಜ್ಯೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಲುಮ್ನಿ ಕ್ಲಬ್ (ಜೆಎಸಿ) ಆಯೋಜಿಸಿದ್ದ ಪಕ್ಷಿಗಳಿಗೆ ನೀರು ಕಲ್ಪಿಸುವ ಮಡಕೆ ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಜೆಸಿಐ ಸಂಸ್ಥೆಯಿಂದ ಮರ–ಗಿಡಗಳಲ್ಲಿ ಮಡಕೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾದರಿಯಾಗಿದೆ. ಬೇಸಿಗೆ ಮುಗಿಯುವ ತನಕ ಮಡಕೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕಾಳಜಿವಹಿಸಲು ಸಲಹೆ ನೀಡಿದರು.</p>.<p>ಜೆಎಸಿ ತಾಲ್ಲೂಕು ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಮಾತನಾಡಿ, ‘ಜೆಸಿಐ, ಜೆಎಸಿ ಸಂಸ್ಥೆಯು ಒಂದು ಪಾತ್ರೆ ನೀರು – ನೂರಾರು ಪಕ್ಷಿಗಳಿಗೆ ನೆರವು ಘೋಷಣೆಯೊಂದಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಚಿಕ್ಕ ಪ್ರಯತ್ನ ಮಾಡುತ್ತಿದೆ. 10 ದಿನ ನಡೆಯುವ ಈ ಅಭಿಯಾನದಲ್ಲಿ ತಾಲ್ಲೂಕಿನ ಜನತೆ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ತಮ್ಮ ಮನೆಯ ಸುತ್ತಮುತ್ತ, ಛಾವಣಿ ಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡ ಬಹುದು. ಇದನ್ನು ಮಾಡುವ ಅತ್ಯುತ್ತಮ ಪಕ್ಷಿ ಪ್ರೇಮಿಗಳಿಗೆ ಬಹುಮಾನ ಕೊಡಲಾಗುವುದು’ ಎಂದರು.</p>.<p>ಬಿ.ಎಸ್.ರವಿಶಂಕರ, ವಲಯ ಮಂಡಳಿ ಸಂಸತ್ ಸದಸ್ಯ ವಿಶ್ವನಾಥ, ಪ್ರಸನ್ನಕುಮಾರ ಜೈನ್, ರವೀಂದ್ರ ಅಧಿಕಾರ, ಇರ್ಷಾದ್ ಭಾಷ, ಪ್ರಭಾಕರ, ಶಿವಕುಮಾರ, ಹುಲಿರಾಜ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-25-1318591195</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>