<p><strong>ಹರಪನಹಳ್ಳಿ</strong>: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಸುರಿದ ಮಳೆಗೆ ಒಟ್ಟು 108 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಹಲವು ಹಳ್ಳಿಗಳು ರಾತ್ರಿಯಿಡೀ ಕತ್ತಲು ಆವರಿಸಿತ್ತು. ಭಾನುವಾರ ಸಂಜೆ ವಿದ್ಯುತ್ ಪೂರೈಕೆಯಾಯಿತು.</p>.<p>‘ತೆಲಿಗಿ ಉಪವಿಭಾಗದ ಕಂಚಿಕೇರೆ, ಉಚ್ಚಂಗಿದುರ್ಗ ಮತ್ತು ತೆಲಿಗಿ ವ್ಯಾಪ್ತಿಯಲ್ಲಿ 90 ಕಂಬಗಳು, ಎಂಟು ವಿದ್ಯುತ್ ಪರಿವರ್ತಕಗಳ ಕಂಬಗಳು ಮುರಿದಿವೆ. ರಾತ್ರಿಯಿಂದಲೇ ದುರಸ್ತಿ ಕಾರ್ಯ ನಡೆಯಿತು. ಕಂಚಿಕೆರೆ ಗ್ರಾಮವೊಂದರಲ್ಲೇ ಎಂಟು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಸಂಜೆವರೆಗೂ ಆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ’ ಎಂದು ಬೆಸ್ಕಾಂ ತೆಲಿಗಿ ಉಪವಿಭಾಗದ ಎಇಇ ಪಂಡಿತರಾಧ್ಯ ತಿಳಿಸಿದರು.</p>.<p>ಬೆಸ್ಕಾಂ ಹರಪನಹಳ್ಳಿ ಉಪವಿಭಾಗದ ಎಇಇ ಪ್ರಕಾಶ್ ಪತ್ತೆನೂರು ಮಾತನಾಡಿ, ‘ಶೃಂಗಾರತೋಟ ಒಳಗೊಂಡು 18 ವಿದ್ಯುತ್ ಕಂಬಗಳು ಹಾಗೂ ಒಂದು ಪರಿವರ್ತಕಕ್ಕೆ ಹಾನಿಯಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗಿದೆ’ ಎಂದು ಹೇಳಿದರು.</p>.<p>ರಂಗಾಪುರ ಕ್ರಾಸ್ ಬಳಿಯ ದಾವಣಗೆರೆ–ಕಂಚಿಕೆರೆ ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರಗಳು, ಕಂಬಗಳನ್ನು ಹಲುವಾಗಲು ಠಾಣೆ ಪೊಲೀಸರು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<p>ಮಳೆ ವರದಿ: ಹರಪನಹಳ್ಳಿ 3.4 ಸೆಂ.ಮೀ, ಅರಸೀಕೆರೆ 2.3 ಸೆಂ.ಮೀ, ಹಿರೆಮೇಗಳಗೆರೆ 2.0 ಸೆಂ.ಮೀ, ಉಚ್ಚಂಗಿದುರ್ಗ, ತೆಲಿಗಿ, ಹಲುವಾಗಲು ತಲಾ 1.4 ಸೆಂ.ಮೀ. ಮಳೆ ಸುರಿದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-25-177727769</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ</strong>: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಸುರಿದ ಮಳೆಗೆ ಒಟ್ಟು 108 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಹಲವು ಹಳ್ಳಿಗಳು ರಾತ್ರಿಯಿಡೀ ಕತ್ತಲು ಆವರಿಸಿತ್ತು. ಭಾನುವಾರ ಸಂಜೆ ವಿದ್ಯುತ್ ಪೂರೈಕೆಯಾಯಿತು.</p>.<p>‘ತೆಲಿಗಿ ಉಪವಿಭಾಗದ ಕಂಚಿಕೇರೆ, ಉಚ್ಚಂಗಿದುರ್ಗ ಮತ್ತು ತೆಲಿಗಿ ವ್ಯಾಪ್ತಿಯಲ್ಲಿ 90 ಕಂಬಗಳು, ಎಂಟು ವಿದ್ಯುತ್ ಪರಿವರ್ತಕಗಳ ಕಂಬಗಳು ಮುರಿದಿವೆ. ರಾತ್ರಿಯಿಂದಲೇ ದುರಸ್ತಿ ಕಾರ್ಯ ನಡೆಯಿತು. ಕಂಚಿಕೆರೆ ಗ್ರಾಮವೊಂದರಲ್ಲೇ ಎಂಟು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಸಂಜೆವರೆಗೂ ಆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ’ ಎಂದು ಬೆಸ್ಕಾಂ ತೆಲಿಗಿ ಉಪವಿಭಾಗದ ಎಇಇ ಪಂಡಿತರಾಧ್ಯ ತಿಳಿಸಿದರು.</p>.<p>ಬೆಸ್ಕಾಂ ಹರಪನಹಳ್ಳಿ ಉಪವಿಭಾಗದ ಎಇಇ ಪ್ರಕಾಶ್ ಪತ್ತೆನೂರು ಮಾತನಾಡಿ, ‘ಶೃಂಗಾರತೋಟ ಒಳಗೊಂಡು 18 ವಿದ್ಯುತ್ ಕಂಬಗಳು ಹಾಗೂ ಒಂದು ಪರಿವರ್ತಕಕ್ಕೆ ಹಾನಿಯಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗಿದೆ’ ಎಂದು ಹೇಳಿದರು.</p>.<p>ರಂಗಾಪುರ ಕ್ರಾಸ್ ಬಳಿಯ ದಾವಣಗೆರೆ–ಕಂಚಿಕೆರೆ ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರಗಳು, ಕಂಬಗಳನ್ನು ಹಲುವಾಗಲು ಠಾಣೆ ಪೊಲೀಸರು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<p>ಮಳೆ ವರದಿ: ಹರಪನಹಳ್ಳಿ 3.4 ಸೆಂ.ಮೀ, ಅರಸೀಕೆರೆ 2.3 ಸೆಂ.ಮೀ, ಹಿರೆಮೇಗಳಗೆರೆ 2.0 ಸೆಂ.ಮೀ, ಉಚ್ಚಂಗಿದುರ್ಗ, ತೆಲಿಗಿ, ಹಲುವಾಗಲು ತಲಾ 1.4 ಸೆಂ.ಮೀ. ಮಳೆ ಸುರಿದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-25-177727769</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>