<p>ಹರಪನಹಳ್ಳಿ: ‘ದೇವಸ್ಥಾನ ನಿರ್ಮಾಣದಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ’ ಎಂದು ಉಚ್ಚಂಗಿದುರ್ಗ– ರಾಮಘಟ್ಟ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ರೇಣುಕಾ ಬಡಾವಣೆಯಲ್ಲಿ ಶನಿವಾರ ಆಯೋಜಿಸಿದ್ದ ವೀರಾಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ದೀನ ದಲಿತರ, ಬಡವರ ರಕ್ಷಣೆಗೆ ವೀರಾಂಜನೇಯ ಸದಾ ಇರುತ್ತಾರೆ. ಇಂದಿನ ಮಠಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ, ಮಾನವ ಧರ್ಮವೇ ದೊಡ್ಡದು ಎಂಬಂತೆ ಇರಬೇಕು’ ಎಂದು ತಿಳಿಸಿದರು.</p>.<p>ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ‘ಸಕಲ ಜೀವರಾಶಿಗಳಲ್ಲಿ ದೈವತ್ವ ಕಾಣುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ’ ಎಂದರು.</p>.<p>ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ‘ಐತಿಹಾಸಿಕ ಉಚ್ಚಂಗಿದುರ್ಗ ಗ್ರಾಮವು ದೇವಸ್ಥಾನ ಗಳ ತವರು. ಇಲ್ಲಿನ ವೀರಾಂಜನೇಯನ ಪೂಜೆಯು ಭಕ್ತರಲ್ಲಿ ಆತ್ಮಸ್ಥೈರ್ಯ ವೃದ್ಧಿಸುತ್ತದೆ’ ಎಂದು ಹೇಳಿದರು.</p>.<p>ಕೆಪಿಸಿಸಿ ಎಸ್.ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಅವರು, ‘ಭಕ್ತಿಯ ಜೊತೆಗೆ ಸಂವಿಧಾನವನ್ನು ಗೌರವಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.</p>.<p>ಉಚ್ಚಂಗೆಮ್ಮ ಪಟ್ಟದ ಪೂಜಾರಿ ವಯ್ಯಾಳಿ ಹನುಮಂತಪ್ಪ, ಕೆಂಚನಗೌಡ ಪಾಟೀಲ, ಎಂ.ಬಿ. ಯಶವಂತ ಗೌಡ, ಕೆ.ಎಂ. ಶಿವಕುಮಾರ್, ಮಹಾಂತೇಶ್ ನಾಯ್ಕ, ಮಡ್ರಳ್ಳಿ ಕೆಂಚಪ್ಪ, ಎಂ.ಕುಮಾರ್, ಶೇಖರಪ್ಪ, ಮಂಜಪ್ಪ, ಸೋಮಶೇಖರ್ ಗೌಡ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-25-1598563867</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಪನಹಳ್ಳಿ: ‘ದೇವಸ್ಥಾನ ನಿರ್ಮಾಣದಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ’ ಎಂದು ಉಚ್ಚಂಗಿದುರ್ಗ– ರಾಮಘಟ್ಟ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ರೇಣುಕಾ ಬಡಾವಣೆಯಲ್ಲಿ ಶನಿವಾರ ಆಯೋಜಿಸಿದ್ದ ವೀರಾಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ದೀನ ದಲಿತರ, ಬಡವರ ರಕ್ಷಣೆಗೆ ವೀರಾಂಜನೇಯ ಸದಾ ಇರುತ್ತಾರೆ. ಇಂದಿನ ಮಠಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ, ಮಾನವ ಧರ್ಮವೇ ದೊಡ್ಡದು ಎಂಬಂತೆ ಇರಬೇಕು’ ಎಂದು ತಿಳಿಸಿದರು.</p>.<p>ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ‘ಸಕಲ ಜೀವರಾಶಿಗಳಲ್ಲಿ ದೈವತ್ವ ಕಾಣುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ’ ಎಂದರು.</p>.<p>ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ‘ಐತಿಹಾಸಿಕ ಉಚ್ಚಂಗಿದುರ್ಗ ಗ್ರಾಮವು ದೇವಸ್ಥಾನ ಗಳ ತವರು. ಇಲ್ಲಿನ ವೀರಾಂಜನೇಯನ ಪೂಜೆಯು ಭಕ್ತರಲ್ಲಿ ಆತ್ಮಸ್ಥೈರ್ಯ ವೃದ್ಧಿಸುತ್ತದೆ’ ಎಂದು ಹೇಳಿದರು.</p>.<p>ಕೆಪಿಸಿಸಿ ಎಸ್.ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಅವರು, ‘ಭಕ್ತಿಯ ಜೊತೆಗೆ ಸಂವಿಧಾನವನ್ನು ಗೌರವಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.</p>.<p>ಉಚ್ಚಂಗೆಮ್ಮ ಪಟ್ಟದ ಪೂಜಾರಿ ವಯ್ಯಾಳಿ ಹನುಮಂತಪ್ಪ, ಕೆಂಚನಗೌಡ ಪಾಟೀಲ, ಎಂ.ಬಿ. ಯಶವಂತ ಗೌಡ, ಕೆ.ಎಂ. ಶಿವಕುಮಾರ್, ಮಹಾಂತೇಶ್ ನಾಯ್ಕ, ಮಡ್ರಳ್ಳಿ ಕೆಂಚಪ್ಪ, ಎಂ.ಕುಮಾರ್, ಶೇಖರಪ್ಪ, ಮಂಜಪ್ಪ, ಸೋಮಶೇಖರ್ ಗೌಡ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-25-1598563867</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>