ಹೊಸಪೇಟೆ (ವಿಜಯನಗರ): ಇಲ್ಲಿನ ಆಕಾಶವಾಣಿ ಎಫ್.ಎಂ. ಕೇಂದ್ರವು ಹಿಂದಿ ಗೀತೆಗಳ ಪ್ರಸಾರವನ್ನು ತಡೆದಿದೆ. ಅಲ್ಲದೇ ನಿರೂಪಕರಿಗೂ ಹಿಂದಿ ಬಳಸದಂತೆ ಕೇಂದ್ರದ ಮುಖ್ಯಸ್ಥ ಎಂ.ಎಸ್. ನಾಗೇಂದ್ರ ಅವರು ಸೂಚನೆ ಕೊಟ್ಟಿದ್ದಾರೆ.
ಸ್ವತಃ ನಾಗೇಂದ್ರ ಅವರೇ ಆಕಾಶವಾಣಿ ಕೇಳುಗ ಜೆ. ನೀಲಕಂಠ ಅವರಿಗೆ ಪತ್ರ ಬರೆದು, ‘ಹಾಡಿನ ಬಂಡಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಹಿಂದಿ ಗೀತೆಗಳಿಗೆ ಆಕ್ಷೇಪ ಎತ್ತಿದ್ದೀರಿ. ಇನ್ನು ಮುಂದೆ ಹಿಂದಿ ಗೀತೆ ಪ್ರಸಾರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
‘ಆಕಾಶವಾಣಿಯಲ್ಲಿ ಹಿಂದಿ ಡಿಂಡಿಮ..’ ಶೀರ್ಷಿಕೆ ಅಡಿ ಬುಧವಾರ (ಏ.28) ‘ಪ್ರಜಾವಾಣಿ’ ನೀಲಕಂಠ ಅವರ ದೂರಿನ ಮೇರೆಗೆ ವರದಿ ಪ್ರಕಟಿಸಿತ್ತು.