ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಹಿಂದಿ ಗೀತೆ ಪ್ರಸಾರಕ್ಕೆ ತಡೆ

Last Updated 29 ಏಪ್ರಿಲ್ 2021, 15:52 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಆಕಾಶವಾಣಿ ಎಫ್‌.ಎಂ. ಕೇಂದ್ರವು ಹಿಂದಿ ಗೀತೆಗಳ ಪ್ರಸಾರವನ್ನು ತಡೆದಿದೆ. ಅಲ್ಲದೇ ನಿರೂಪಕರಿಗೂ ಹಿಂದಿ ಬಳಸದಂತೆ ಕೇಂದ್ರದ ಮುಖ್ಯಸ್ಥ ಎಂ.ಎಸ್‌. ನಾಗೇಂದ್ರ ಅವರು ಸೂಚನೆ ಕೊಟ್ಟಿದ್ದಾರೆ.

ಸ್ವತಃ ನಾಗೇಂದ್ರ ಅವರೇ ಆಕಾಶವಾಣಿ ಕೇಳುಗ ಜೆ. ನೀಲಕಂಠ ಅವರಿಗೆ ಪತ್ರ ಬರೆದು, ‘ಹಾಡಿನ ಬಂಡಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಹಿಂದಿ ಗೀತೆಗಳಿಗೆ ಆಕ್ಷೇಪ ಎತ್ತಿದ್ದೀರಿ. ಇನ್ನು ಮುಂದೆ ಹಿಂದಿ ಗೀತೆ ಪ್ರಸಾರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

‘ಆಕಾಶವಾಣಿಯಲ್ಲಿ ಹಿಂದಿ ಡಿಂಡಿಮ..’ ಶೀರ್ಷಿಕೆ ಅಡಿ ಬುಧವಾರ (ಏ.28) ‘ಪ್ರಜಾವಾಣಿ’ ನೀಲಕಂಠ ಅವರ ದೂರಿನ ಮೇರೆಗೆ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT