<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಹೊಳಗುಂದಿ ಬಾವಿಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಬಳಿ ಶುಕ್ರವಾರ ಯೂರಿಯಾ ಗೊಬ್ಬರ ಖರೀದಿಗೆ ನೂಕುನುಗ್ಗಲು ಉಂಟಾಯಿತು.</p>.<p>ತಾಲ್ಲೂಕಿನಲ್ಲಿ ಇನ್ನೂ ಬಿತ್ತನೆ ಆಂಭವಾಗಿಲ್ಲ. ಯೂರಿಯಾ ಗೊಬ್ಬರ ಅವಶ್ಯಕತೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅಭಾವ ತಲೆದೋರುವ ಆತಂಕದಿಂದ ರೈತರು ಯೂರಿಯಾ ಖರೀದಿಗೆ ಮುಗಿ ಬೀಳುತ್ತಿದ್ದಾರೆ.</p>.<p>ತಾಲ್ಲೂಕಿನ ಹೊಳಗುಂದಿ, ಬಾವಿಹಳ್ಳಿಯ ನೂರಾರು ರೈತರು ಗೋದಾಮಿನ ಮುಂದೆ ಜಮಾಯಿಸಿದರು. ಯೂರಿಯಾ ಖರೀದಿಗೆ ಎಫ್ಐಡಿ ನಮೂದಿಸುವುದು ಕಡ್ಡಾಯಗೊಳಿಸಲಾಗಿದ್ದು, ಸರ್ವರ್ ಸಮಸ್ಯೆಯಿಂದ ಎಫ್ಐಡಿ ನಮೂದು ವಿಳಂಬ ಆಗುತ್ತಿದ್ದಂತೆ ರೈತರು ಗಲಾಟೆ ಶುರು ಮಾಡಿದರು.</p>.<p>ಸಹಾಯಕ ಕೃಷಿ ನಿರ್ದೇಶಕ ಕೆ.ಟಿ. ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ, ‘ಸರ್ವರ್ ಸಮಸ್ಯೆ ಇರುವುದರಿಂದ ಪಹಣಿ, ಆಧಾರ್ ಕಾರ್ಡ್ ತೋರಿಸಿ ಎಕರೆಗೆ ಒಂದು ಚೀಲದಂತೆ ಪ್ರತಿ ರೈತರಿಗೆ ಐದು ಚೀಲ ಗೊಬ್ಬರ ವಿತರಿಸಿ’ ಎಂದು ಸಿಬ್ಬಂದಿಗೆ ಸೂಚಿಸಿದರು.</p>.<p>‘ಸೊಸೈಟಿಯವರು ಕೇವಲ ಹೊಳಗುಂದಿ ಗ್ರಾಮದ ರೈತರಿಗೆ ಆದ್ಯತೆ ನೀಡಿ, ಗೊಬ್ಬರಕ್ಕೆ ಮುಂಗಡ ಚೀಟಿ ನೀಡಿದ್ದಾರೆ’ ಎಂದು ಬಾವಿಹಳ್ಳಿ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಲಾಖೆ ಸಿಬ್ಬಂದಿ ಗೊಬ್ಬರ ಮಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-25-1611923465</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಹೊಳಗುಂದಿ ಬಾವಿಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಬಳಿ ಶುಕ್ರವಾರ ಯೂರಿಯಾ ಗೊಬ್ಬರ ಖರೀದಿಗೆ ನೂಕುನುಗ್ಗಲು ಉಂಟಾಯಿತು.</p>.<p>ತಾಲ್ಲೂಕಿನಲ್ಲಿ ಇನ್ನೂ ಬಿತ್ತನೆ ಆಂಭವಾಗಿಲ್ಲ. ಯೂರಿಯಾ ಗೊಬ್ಬರ ಅವಶ್ಯಕತೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅಭಾವ ತಲೆದೋರುವ ಆತಂಕದಿಂದ ರೈತರು ಯೂರಿಯಾ ಖರೀದಿಗೆ ಮುಗಿ ಬೀಳುತ್ತಿದ್ದಾರೆ.</p>.<p>ತಾಲ್ಲೂಕಿನ ಹೊಳಗುಂದಿ, ಬಾವಿಹಳ್ಳಿಯ ನೂರಾರು ರೈತರು ಗೋದಾಮಿನ ಮುಂದೆ ಜಮಾಯಿಸಿದರು. ಯೂರಿಯಾ ಖರೀದಿಗೆ ಎಫ್ಐಡಿ ನಮೂದಿಸುವುದು ಕಡ್ಡಾಯಗೊಳಿಸಲಾಗಿದ್ದು, ಸರ್ವರ್ ಸಮಸ್ಯೆಯಿಂದ ಎಫ್ಐಡಿ ನಮೂದು ವಿಳಂಬ ಆಗುತ್ತಿದ್ದಂತೆ ರೈತರು ಗಲಾಟೆ ಶುರು ಮಾಡಿದರು.</p>.<p>ಸಹಾಯಕ ಕೃಷಿ ನಿರ್ದೇಶಕ ಕೆ.ಟಿ. ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ, ‘ಸರ್ವರ್ ಸಮಸ್ಯೆ ಇರುವುದರಿಂದ ಪಹಣಿ, ಆಧಾರ್ ಕಾರ್ಡ್ ತೋರಿಸಿ ಎಕರೆಗೆ ಒಂದು ಚೀಲದಂತೆ ಪ್ರತಿ ರೈತರಿಗೆ ಐದು ಚೀಲ ಗೊಬ್ಬರ ವಿತರಿಸಿ’ ಎಂದು ಸಿಬ್ಬಂದಿಗೆ ಸೂಚಿಸಿದರು.</p>.<p>‘ಸೊಸೈಟಿಯವರು ಕೇವಲ ಹೊಳಗುಂದಿ ಗ್ರಾಮದ ರೈತರಿಗೆ ಆದ್ಯತೆ ನೀಡಿ, ಗೊಬ್ಬರಕ್ಕೆ ಮುಂಗಡ ಚೀಟಿ ನೀಡಿದ್ದಾರೆ’ ಎಂದು ಬಾವಿಹಳ್ಳಿ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಲಾಖೆ ಸಿಬ್ಬಂದಿ ಗೊಬ್ಬರ ಮಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-25-1611923465</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>