<p><strong>ಹೊಸಪೇಟೆ (ವಿಜಯನಗರ):</strong> ಮನೆ ಮುಂದೆ ಕಸ ಹಾಕದೆ ನಗರಸಭೆ ವಾಹನಗಳಿಗೆ ಹಸಿಕಸ, ಒಣಕಸ ಬೇರ್ಪಡಿಸಿ ಹಾಕಬೇಕು. ಕಸ ಹಾಕಿದ್ದು ಕಂಡುಬಂದರೆ ಮೊದಲ ನೋಟಿಸ್ಗೆ ₹200 ದಂಡ, 2ನೇ ನೋಟಿಸ್ಗೆ ₹500 ದಂಡ ಹಾಗೂ ಬಳಿಕ ಮನೆಯ ಮುಂದೆಯೇ ಕಸದ ವಾಹನದಿಂದಲೇ ಕಸ ಸುರಿಯುವ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಎಚ್ಚರಿಸಲಾಗಿದೆ.</p><p>ಮಂಗಳವಾರ ಇಲ್ಲಿ ಎನ್.ರೂಪೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 34ನೇ ವಾರ್ಡ್ನ ಲತಾ ಸಂತೋಷ್ ವಿಷಯ ಪ್ರಸ್ತಾಪಿಸಿದಾಗ ಹಲವು ಸದಸ್ಯರು ಹಲವು ಬಗೆಯಲ್ಲಿ ಸಲಹೆ ನೀಡಿದರು. ಕೊನೆಗೆ ಅಧ್ಯಕ್ಷ ರೂಪೇಶ್ ಅವರು ಈ ನಿರ್ಧಾರ ಪ್ರಕಟಿಸಿ, ಆಸ್ತಿ ತೆರಿಗೆ ಪಾವತಿ ವೇಳೆ ದಂಡ ಶುಲ್ಕ ಕಟ್ಟಲು ತಿಳಿಸಲಾಗುವುದು ಎಂದರು. </p><p>ರಾಘವೇಂದ್ರ, ತಾರಿಹಳ್ಳಿ ಜಂಬುನಾಥ ಅವರು ಮಾತನಾಡಿ, ಕೋರ್ಟ್ಗೆ ಹಣ ಪಾವತಿಸುವಂತೆ ಹೇಳಿದರೆ ಮಾತ್ರ ಜನ ಎಚ್ಚೆತ್ತುಕೊಂಡು ತಮ್ಮ ತಪ್ಪನ್ನು ತಿದ್ದಬಹುದು ಎಂದರು. ಈಗಿನ ಎಚ್ಚರಿಕೆಗೆ ಜನ ಸ್ಪಂದಿಸದಿದ್ದರೆ ಮುಂದೆ ಅದೇ ಕ್ರಮ ಅನುಸರಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.</p><p>ವೃತ್ತಗಳಿಗೆ ಹೆಸರು: ನಗರದ ಹಲವು ವೃತ್ತಗಳು, ರಸ್ತೆಗಳಿಗೆ ಹೆಸರು ಇಡುವ ವಿಚಾರವೇ ಇಡೀ ಸಭೆಯ ಅರ್ಧ ಭಾಗವನ್ನು ತಿಂದು ಹಾಕಿದ ಸಂಗತಿಯಾಗಿತ್ತು. ದೊಡ್ಡ ಮಸೀದಿ ಬಳಿಯ ವೃತ್ತಕ್ಕೆ ಅಬ್ದುಲ್ ಕಲಾಂ ಹೆಸರು ಇಡಬೇಕು ಎಂಬ ದುರುಗಮ್ಮ ಜಗದೀಶ ಕಮಟಗಿ ಪ್ರಸ್ತಾವಕ್ಕೆ ಕೆ.ಗೌಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮುಸ್ಲಿಂ ಸಮುದಾಯದ ಸಂತ ಎಸ್ಎಂಎಸ್ಕೆ ವೃತ್ತ ಎಂಬ ಹೆಸರಿಸಲು ಒತ್ತಾಯಿಸಿದರು. ಅಬ್ದುಲ್ ಖದೀರ್, ಮುನ್ನಿ, ಮುಮ್ತಾಜ್ ಸಹಿತ ಕೆಲವರು ಇದಕ್ಕೆ ಬೆಂಬಲ ಸೂಚಿಸಿದರು. ಕೊನೆಗೆ ಎರಡೂ ಕಡೆಯ ಸದಸ್ಯರನ್ನು ಕೂರಿಸಿ, ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಅಧ್ಯಕ್ಷ ರೂಪೇಶ್ ಹೇಳಿದರು.</p><p>ಅಂಬೇಡ್ಕರ್ ಭವನ ಪಕ್ಕದ ವೃತ್ತಕ್ಕೆ ‘ಸಿದ್ಧಾರ್ಥ’ ವೃತ್ತ ಎಂಬ ಹೆಸರು ಇಡುವ ಪ್ರಸ್ತಾವವನ್ನು ಸುಂಕಮ್ಮ ಮುಂದಿಟ್ಟಾಗ ಅಲ್ಲಿ ಬಹಳ ಗೂಡಾರ್ಥದ ಭಾವನೆ ಸದಸ್ಯರಿಗೆ ಮೂಡಿತು. ಕೊನೆಗೆ ಗೌತಮ ಬುದ್ಧ ವೃತ್ತ ಎಂಬ ಹೆಸರು ಇಡಲು ನಿರ್ಧರಿಸಲಾಯಿತು. ಸಾಯಿಬಾಬಾ ದೇವಸ್ಥಾನದಿಂದ ಟಿ.ಬಿ.ಡ್ಯಾಂಗೆ ಸಾಗುವ ರಸ್ತೆಗೆ ಬಲ್ಡೋಟಾ ಹೆಸರು ಇಟ್ಟಿದ್ದು ತಪ್ಪು, ತಕ್ಷಣ ಅದಕ್ಕೆ ತಿರುಮಲ ಅಯ್ಯಂಗಾರ್ ರಸ್ತೆ ಎಂಬ ಹೆಸರು ಇಡಲು ಜಿ.ಎಸ್.ಹನುಮಂತಪ್ಪ ಒತ್ತಾಯಿಸಿದರು. ತಕ್ಷಣ ಹಾಗೆ ಮಾಡಲು ಸಾಧ್ಯವಿಲ್ಲ ಎಂದ ಆಯುಕ್ತ ಎರಗುಡಿ ಶಿವಕುಮಾರ್, ನೋಟಿಸ್ ಕೊಟ್ಟು, ಕಂಪನಿಯ ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರಲಾಗುವುದು ಎಂದರು.</p><p>ಗಣಿ ಕಂಪನಿಗೆ ಭೂಮಿ: ಆರ್ಬಿಎಸ್ಎಸ್ಎನ್ ಕಂಪನಿಗೆ ಸಂಕ್ಲಾಪುರದಲ್ಲಿ 64.50 ಎಕರೆ ಜಮೀನನ್ನು 30 ವರ್ಷಗಳ ಮಟ್ಟಿಗೆ ಗುತ್ತಿಗೆ ನವೀಕರಣ ಮಾಡುವುದಕ್ಕೆ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು. ಇದು ಕಂದಾಯ ಜಾಗವಾಗಿದ್ದು, ನಗರಸಭೆಯ ತೀರ್ಮಾನವನ್ನು ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು ಎಂದು ಆಯುಕ್ತರು ಹೇಳಿದರು.</p><p>ಖಾಸಗಿ ವ್ಯಕ್ತಿಗಳು ನೀರು ಪೂರೈಸುವುದಕ್ಕೆ ಅವಕಾಶ ನೀಡಬೇಕು ಎಂಬ ವಿಷಯ ಬಹಳ ದೀರ್ಘ ಚರ್ಚೆಗೆ ಒಳಪಟ್ಟಿತು. ಇದಕ್ಕೆ ಆಯುಕ್ತ ಶಿವಕುಮಾರ್ ಒಪ್ಪದೆ, ಅಗತ್ಯ ಇರುವಲ್ಲಿಗೆ ನಗರಸಭೆಯೇ ನೀರು ಪೂರೈಸಲಿದೆ, ಒಂದು ವೇಳೆ ಖಾಸಗಿ ವ್ಯಕ್ತಿಗಳು ನೀರು ಪೂರೈಸಿ ಏನಾದರೂ ತೊಂದರೆ ಆದರೆ ನಗರಸಭೆ ಹೊಣೆ ಹೊರಲು ಸಾಧ್ಯವಿಲ್ಲ ಎಂದರು. ಅಬ್ದುಲ್ ಖಾದಿರ್ ಅವರು ಹೆಸರು, ಚಿಹ್ನೆ ಬಳಸದೆ ಖಾಸಗಿ ವ್ಯಕ್ತಿಗಳು ನೀರು ಪೂರೈಸಲಿ ಎಂದರು. ಕೊನೆಗೆ ಸದಸ್ಯರೆಲ್ಲರ ಒಪ್ಪಿಗೆ ಇದೆ ಎಂಬ ಶಿಫಾರಸನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿ, ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ತಾರಿಹಳ್ಳಿ ಜಂಬುನಾಥ ತಿಳಿಸಿದರು. ಆಯುಕ್ತರು ಅದಕ್ಕೆ ಒಪ್ಪಿದರು. </p><p>ಸಭೆಯಲ್ಲಿ ಉಪಾಧ್ಯಕ್ಷ ಬಿ.ಜೀವರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಶರವಣ ಇದ್ದರು.</p><p><strong>₹31.5 ಕೋಟಿಯಲ್ಲಿ ಯುಜಿಡಿ ಕಾಮಗಾರಿ</strong></p><p>ನಗರದಲ್ಲಿ ₹23 ಕೋಟಿ ಹಾಗೂ ₹8.5 ಕೋಟಿ ವೆಚ್ಚದಲ್ಲಿ ಒಳಚರಂಡಿ (ಯುಜಿಡಿ) ಸುಧಾರಣಾ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ಕ್ರಿಯಾಯೋಜನೆ ಸಿದ್ಧಪಡಿಸಲು ಶೀಘ್ರ ಏಜೆನ್ಸಿಯೊಂದನ್ನು ಟೆಂಡರ್ ಮೂಲಕ ಆಯ್ಕೆ ಮಾಡಲಾಗುವುದು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಯುಜಿಡಿ ಸಮಸ್ಯೆ ಇದೆ ಎಂಬುದನ್ನು ಗಮನಕ್ಕೆ ತರಬೇಕು ಎಂದು ಆಯುಕ್ತ ಶಿವಕುಮಾರ್ ಕೇಳಿಕೊಂಡರು.</p><ul><li><p>ಆಸ್ತಿ ತೆರಿಗೆ ಶೇ 3ರಷ್ಟು ಹೆಚ್ಚಿಸಲು ಸಮ್ಮತಿ</p></li><li><p>ನೀರಿನ ಶುಲ್ಕ ಸದ್ಯದ ₹120ರಿಂದ ಏರಿಕೆ ಇಲ್ಲ</p></li><li><p>ಖಾತಾ ಬದಲಾವಣೆಯ ಮ್ಯುಟೇಷನ್ ಶುಲ್ಕ ಶೇ 1ರಷ್ಟು ಹೆಚ್ಚಳ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಮನೆ ಮುಂದೆ ಕಸ ಹಾಕದೆ ನಗರಸಭೆ ವಾಹನಗಳಿಗೆ ಹಸಿಕಸ, ಒಣಕಸ ಬೇರ್ಪಡಿಸಿ ಹಾಕಬೇಕು. ಕಸ ಹಾಕಿದ್ದು ಕಂಡುಬಂದರೆ ಮೊದಲ ನೋಟಿಸ್ಗೆ ₹200 ದಂಡ, 2ನೇ ನೋಟಿಸ್ಗೆ ₹500 ದಂಡ ಹಾಗೂ ಬಳಿಕ ಮನೆಯ ಮುಂದೆಯೇ ಕಸದ ವಾಹನದಿಂದಲೇ ಕಸ ಸುರಿಯುವ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಎಚ್ಚರಿಸಲಾಗಿದೆ.</p><p>ಮಂಗಳವಾರ ಇಲ್ಲಿ ಎನ್.ರೂಪೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 34ನೇ ವಾರ್ಡ್ನ ಲತಾ ಸಂತೋಷ್ ವಿಷಯ ಪ್ರಸ್ತಾಪಿಸಿದಾಗ ಹಲವು ಸದಸ್ಯರು ಹಲವು ಬಗೆಯಲ್ಲಿ ಸಲಹೆ ನೀಡಿದರು. ಕೊನೆಗೆ ಅಧ್ಯಕ್ಷ ರೂಪೇಶ್ ಅವರು ಈ ನಿರ್ಧಾರ ಪ್ರಕಟಿಸಿ, ಆಸ್ತಿ ತೆರಿಗೆ ಪಾವತಿ ವೇಳೆ ದಂಡ ಶುಲ್ಕ ಕಟ್ಟಲು ತಿಳಿಸಲಾಗುವುದು ಎಂದರು. </p><p>ರಾಘವೇಂದ್ರ, ತಾರಿಹಳ್ಳಿ ಜಂಬುನಾಥ ಅವರು ಮಾತನಾಡಿ, ಕೋರ್ಟ್ಗೆ ಹಣ ಪಾವತಿಸುವಂತೆ ಹೇಳಿದರೆ ಮಾತ್ರ ಜನ ಎಚ್ಚೆತ್ತುಕೊಂಡು ತಮ್ಮ ತಪ್ಪನ್ನು ತಿದ್ದಬಹುದು ಎಂದರು. ಈಗಿನ ಎಚ್ಚರಿಕೆಗೆ ಜನ ಸ್ಪಂದಿಸದಿದ್ದರೆ ಮುಂದೆ ಅದೇ ಕ್ರಮ ಅನುಸರಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.</p><p>ವೃತ್ತಗಳಿಗೆ ಹೆಸರು: ನಗರದ ಹಲವು ವೃತ್ತಗಳು, ರಸ್ತೆಗಳಿಗೆ ಹೆಸರು ಇಡುವ ವಿಚಾರವೇ ಇಡೀ ಸಭೆಯ ಅರ್ಧ ಭಾಗವನ್ನು ತಿಂದು ಹಾಕಿದ ಸಂಗತಿಯಾಗಿತ್ತು. ದೊಡ್ಡ ಮಸೀದಿ ಬಳಿಯ ವೃತ್ತಕ್ಕೆ ಅಬ್ದುಲ್ ಕಲಾಂ ಹೆಸರು ಇಡಬೇಕು ಎಂಬ ದುರುಗಮ್ಮ ಜಗದೀಶ ಕಮಟಗಿ ಪ್ರಸ್ತಾವಕ್ಕೆ ಕೆ.ಗೌಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮುಸ್ಲಿಂ ಸಮುದಾಯದ ಸಂತ ಎಸ್ಎಂಎಸ್ಕೆ ವೃತ್ತ ಎಂಬ ಹೆಸರಿಸಲು ಒತ್ತಾಯಿಸಿದರು. ಅಬ್ದುಲ್ ಖದೀರ್, ಮುನ್ನಿ, ಮುಮ್ತಾಜ್ ಸಹಿತ ಕೆಲವರು ಇದಕ್ಕೆ ಬೆಂಬಲ ಸೂಚಿಸಿದರು. ಕೊನೆಗೆ ಎರಡೂ ಕಡೆಯ ಸದಸ್ಯರನ್ನು ಕೂರಿಸಿ, ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಅಧ್ಯಕ್ಷ ರೂಪೇಶ್ ಹೇಳಿದರು.</p><p>ಅಂಬೇಡ್ಕರ್ ಭವನ ಪಕ್ಕದ ವೃತ್ತಕ್ಕೆ ‘ಸಿದ್ಧಾರ್ಥ’ ವೃತ್ತ ಎಂಬ ಹೆಸರು ಇಡುವ ಪ್ರಸ್ತಾವವನ್ನು ಸುಂಕಮ್ಮ ಮುಂದಿಟ್ಟಾಗ ಅಲ್ಲಿ ಬಹಳ ಗೂಡಾರ್ಥದ ಭಾವನೆ ಸದಸ್ಯರಿಗೆ ಮೂಡಿತು. ಕೊನೆಗೆ ಗೌತಮ ಬುದ್ಧ ವೃತ್ತ ಎಂಬ ಹೆಸರು ಇಡಲು ನಿರ್ಧರಿಸಲಾಯಿತು. ಸಾಯಿಬಾಬಾ ದೇವಸ್ಥಾನದಿಂದ ಟಿ.ಬಿ.ಡ್ಯಾಂಗೆ ಸಾಗುವ ರಸ್ತೆಗೆ ಬಲ್ಡೋಟಾ ಹೆಸರು ಇಟ್ಟಿದ್ದು ತಪ್ಪು, ತಕ್ಷಣ ಅದಕ್ಕೆ ತಿರುಮಲ ಅಯ್ಯಂಗಾರ್ ರಸ್ತೆ ಎಂಬ ಹೆಸರು ಇಡಲು ಜಿ.ಎಸ್.ಹನುಮಂತಪ್ಪ ಒತ್ತಾಯಿಸಿದರು. ತಕ್ಷಣ ಹಾಗೆ ಮಾಡಲು ಸಾಧ್ಯವಿಲ್ಲ ಎಂದ ಆಯುಕ್ತ ಎರಗುಡಿ ಶಿವಕುಮಾರ್, ನೋಟಿಸ್ ಕೊಟ್ಟು, ಕಂಪನಿಯ ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರಲಾಗುವುದು ಎಂದರು.</p><p>ಗಣಿ ಕಂಪನಿಗೆ ಭೂಮಿ: ಆರ್ಬಿಎಸ್ಎಸ್ಎನ್ ಕಂಪನಿಗೆ ಸಂಕ್ಲಾಪುರದಲ್ಲಿ 64.50 ಎಕರೆ ಜಮೀನನ್ನು 30 ವರ್ಷಗಳ ಮಟ್ಟಿಗೆ ಗುತ್ತಿಗೆ ನವೀಕರಣ ಮಾಡುವುದಕ್ಕೆ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು. ಇದು ಕಂದಾಯ ಜಾಗವಾಗಿದ್ದು, ನಗರಸಭೆಯ ತೀರ್ಮಾನವನ್ನು ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು ಎಂದು ಆಯುಕ್ತರು ಹೇಳಿದರು.</p><p>ಖಾಸಗಿ ವ್ಯಕ್ತಿಗಳು ನೀರು ಪೂರೈಸುವುದಕ್ಕೆ ಅವಕಾಶ ನೀಡಬೇಕು ಎಂಬ ವಿಷಯ ಬಹಳ ದೀರ್ಘ ಚರ್ಚೆಗೆ ಒಳಪಟ್ಟಿತು. ಇದಕ್ಕೆ ಆಯುಕ್ತ ಶಿವಕುಮಾರ್ ಒಪ್ಪದೆ, ಅಗತ್ಯ ಇರುವಲ್ಲಿಗೆ ನಗರಸಭೆಯೇ ನೀರು ಪೂರೈಸಲಿದೆ, ಒಂದು ವೇಳೆ ಖಾಸಗಿ ವ್ಯಕ್ತಿಗಳು ನೀರು ಪೂರೈಸಿ ಏನಾದರೂ ತೊಂದರೆ ಆದರೆ ನಗರಸಭೆ ಹೊಣೆ ಹೊರಲು ಸಾಧ್ಯವಿಲ್ಲ ಎಂದರು. ಅಬ್ದುಲ್ ಖಾದಿರ್ ಅವರು ಹೆಸರು, ಚಿಹ್ನೆ ಬಳಸದೆ ಖಾಸಗಿ ವ್ಯಕ್ತಿಗಳು ನೀರು ಪೂರೈಸಲಿ ಎಂದರು. ಕೊನೆಗೆ ಸದಸ್ಯರೆಲ್ಲರ ಒಪ್ಪಿಗೆ ಇದೆ ಎಂಬ ಶಿಫಾರಸನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿ, ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ತಾರಿಹಳ್ಳಿ ಜಂಬುನಾಥ ತಿಳಿಸಿದರು. ಆಯುಕ್ತರು ಅದಕ್ಕೆ ಒಪ್ಪಿದರು. </p><p>ಸಭೆಯಲ್ಲಿ ಉಪಾಧ್ಯಕ್ಷ ಬಿ.ಜೀವರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಶರವಣ ಇದ್ದರು.</p><p><strong>₹31.5 ಕೋಟಿಯಲ್ಲಿ ಯುಜಿಡಿ ಕಾಮಗಾರಿ</strong></p><p>ನಗರದಲ್ಲಿ ₹23 ಕೋಟಿ ಹಾಗೂ ₹8.5 ಕೋಟಿ ವೆಚ್ಚದಲ್ಲಿ ಒಳಚರಂಡಿ (ಯುಜಿಡಿ) ಸುಧಾರಣಾ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ಕ್ರಿಯಾಯೋಜನೆ ಸಿದ್ಧಪಡಿಸಲು ಶೀಘ್ರ ಏಜೆನ್ಸಿಯೊಂದನ್ನು ಟೆಂಡರ್ ಮೂಲಕ ಆಯ್ಕೆ ಮಾಡಲಾಗುವುದು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಯುಜಿಡಿ ಸಮಸ್ಯೆ ಇದೆ ಎಂಬುದನ್ನು ಗಮನಕ್ಕೆ ತರಬೇಕು ಎಂದು ಆಯುಕ್ತ ಶಿವಕುಮಾರ್ ಕೇಳಿಕೊಂಡರು.</p><ul><li><p>ಆಸ್ತಿ ತೆರಿಗೆ ಶೇ 3ರಷ್ಟು ಹೆಚ್ಚಿಸಲು ಸಮ್ಮತಿ</p></li><li><p>ನೀರಿನ ಶುಲ್ಕ ಸದ್ಯದ ₹120ರಿಂದ ಏರಿಕೆ ಇಲ್ಲ</p></li><li><p>ಖಾತಾ ಬದಲಾವಣೆಯ ಮ್ಯುಟೇಷನ್ ಶುಲ್ಕ ಶೇ 1ರಷ್ಟು ಹೆಚ್ಚಳ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>