‘ಮೂರನೇ ದಿನದ ಗಣೇಶ ವಿಸರ್ಜನೆಯ ವೇಳೆ ವಿನಾಯಕ ಮಿತ್ರ ಮಂಡಳಿಯವರು ಡಿ.ಜೆ. ಬಳಸಿದ್ದಾರೆ. ಮೆರವಣಿಗೆ ನಂತರ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾದಾಗ ಮಂಡಳಿಯವರು ಹಾಗೂ ಕೆಲ ಗ್ರಾಮಸ್ಥರು ಹಂಪಸಾಗರ ಉಪಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಠಾಣೆಯ ಸಿಬ್ಬಂದಿ ರಾಮಾಂಜಿನಿ ಹಾಗೂ ಸಿದ್ದೇಶ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಮಾಂಜಿನಿ ಅವರಿಗೆ ಗಾಯಗಳಾಗಿವೆ. ಕೃತ್ಯದಲ್ಲಿ ಭಾಗಿಯಾದ ಗದಗ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಮಂಜು ನಾಯ್ಕ, ಪರಶು ನಾಯ್ಕ ತಪ್ಪಿಸಿಕೊಂಡಿದ್ದಾರೆ. ಇಬ್ಬರು ರೈಲ್ವೆ ಪೊಲೀಸರಾ ಅಥವಾ ನಮ್ಮ ಇಲಾಖೆಯ ಪೊಲೀಸರೇ ಎನ್ನುವುದು ಖಚಿತವಾಗಬೇಕಿದೆ. 2 ಟ್ರ್ಯಾಕ್ಟರ್, ಡಿ.ಜೆ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.