ಕಾರ್ಮಿಕರಿಗೆ ನೆಮ್ಮದಿ
ಜೀತದಿಂದ ಮುಕ್ತರಾದ ಕಾರ್ಮಿಕರು ಗುರುವಾರ ಸಂತಸದಿಂದ ಇದ್ದುದು ಕಂಡುಬಂತು. ಪಂಜರದಿಂದ ಬಿಡುಗಡೆಯಾದ ಹಕ್ಕಿಗಳಂತೆ ಎಲ್ಲರ ಮೊಗದಲ್ಲಿ ಸ್ವಾತಂತ್ರ್ಯದ ಸಂಭ್ರಮ ಮನೆಮಾಡಿತ್ತು.
ಜಿಲ್ಲಾಡಳಿತ ಕೇವಲ ರಕ್ಷಣೆಗೆ ಸೀಮಿತವಾಗದೇ, ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಸ್ವಗ್ರಾಮಕ್ಕೆ ಕಳುಹಿಸುವಲ್ಲಿ ವಿಶೇಷ ಕಾಳಜಿ ವಹಿಸಿತು. ರೈಲಿನಲ್ಲಿ ಕಾರ್ಮಿಕರನ್ನಷ್ಟೇ ಕಳುಹಿಸಿಕೊಡದೆ, ಕಾರ್ಮಿಕರೊಂದಿಗೆ ಇಬ್ಬರು ಪೊಲೀಸ್ ಮತ್ತು ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಹ ರಕ್ಷಣೆಗಾಗಿ ಕಳುಹಿಸಿಕೊಡಲಾಯಿತು.