‘ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಗೊತ್ತಿಲ್ಲ. ಆದರೆ, ಅಪಾರ ಹಾನಿಯಾಗಿದೆ. ₹15 ಲಕ್ಷ ಸಾಲ ಮಾಡಿ ರೆಸ್ಟೊರೆಂಟ್ ನಡೆಸುತ್ತಿದ್ದೆ. ಕೋವಿಡ್ ಬಳಿಕ ಈಗಷ್ಟೇ ವ್ಯವಹಾರ ಚೇತರಿಸಿಕೊಳ್ಳುತ್ತಿತ್ತು. ಈಗ ಬೆಂಕಿ ಹೊತ್ತಿಕೊಂಡು ಹಾನಿಯಾಗಿದ್ದರಿಂದ ತೊಂದರೆ ಆಗಿದೆ’ ಎಂದು ರೆಸ್ಟೊರೆಂಟ್ ಮಾಲೀಕ ರಾಜಕುಮಾರ್ ತಿಳಿಸಿದ್ದಾರೆ.