ಮದ್ರಾಸ್ ಪ್ರಾಂತ, ಕೊಡಗು ಪ್ರಾಂತ,ಮುಂಬೈ ಪ್ರಾಂತ, ಮೈಸೂರು ಪ್ರಾಂತಗಳಾಗಿ ವಿಂಗಡಣೆಯಾಗಿದ್ದ ರಾಜ್ಯವು ಇದೀಗ ಒಂದುಗೂಡಿದೆ.ಕನ್ನಡ ಉಳಿಯಬೇಕಾದರೆ ಕನ್ನಡವನ್ನು ಮಾತನಾಡುವವರು ಹೆಚ್ಚಾಗಬೇಕು. ಮಕ್ಕಳನ್ನು ಕನ್ನಡ ಸಾಹಿತ್ಯದ ಪುಸ್ತಕ ಓದಲು ಪ್ರೋತ್ಸಾಹಿಸಬೇಕು ಎಂದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಹೋ.ರಾ. ವೆಂಕಟೇಶ್, ವಿಜಯ್ ಕುಮಾರ್, ನಾಗರಾಜ್, ವರದಾಪುರ ನಾಗರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ದೇಶ ಭಕ್ತರ ವೇಷವನ್ನು ಹಾಕಿಕೊಂಡಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳು ವಿವಿಧ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿಯ ರಥವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.