ಸಂಜೆ ದೇವರಿಗೆ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಸುಮಾರು 50 ಮೀಟರ್ ದೂರ ತೇರು ಚಲಿಸುತ್ತಿದ್ದಂತೆ ಕಲಶ ಅಲುಗಾಡಿ, ಕೆಳಗೆ ವ್ಯಕ್ತಿಯೊಬ್ಬರ ಮೇಲೆ ಉರುಳಿ ಬಿದ್ದಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಬಳಿಕ ಕಲಶವನ್ನು ಮೊದಲಿನಂತೆ ಪ್ರತಿಷ್ಠಾಪಿಸಿ ತೇರು ಎಳೆಯಲಾಯಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು ತೂರಿ ಹರಕೆ ತೀರಿಸಿದರು. ಬಿಜೆಪಿ ಮುಖಂಡ ಎಚ್.ಆರ್. ಗವಿಯಪ್ಪ ಅವರು ₹1.50 ಲಕ್ಷಕ್ಕೆ ಹರಾಜಿನಲ್ಲಿ ಧ್ವಜ ಪಡೆದರು. ಕಲಶ ಬಿದ್ದದ್ದರಿಂದ ಸುಮಾರು 20ರಿಂದ 25 ನಿಮಿಷ ತೇರು ನಿಂತಲ್ಲಿಯೇ ನಿಂತಿತ್ತು. ಕೋವಿಡ್ನಿಂದ ಎರಡು ವರ್ಷ ಜಾತ್ರೆ ನಡೆದಿರಲಿಲ್ಲ. ಹೊಸ ತೇರಿನ ಮೇಲೆ ಇತ್ತೀಚೆಗೆ ಕಲಶ ಪ್ರತಿಷ್ಠಾಪಿಸಲಾಗಿತ್ತು.