ವಿರೋಧ ಪಕ್ಷ ಶಾಸಕರಿಗೆ ಸುಣ್ಣ
ಜಿಲ್ಲೆಗೆ ಹೆಚ್ಚೇನೂ ಸಿಕ್ಕಿಲ್ಲ. ಈ ಪೈಕಿ ವಿರೋಧ ಪಕ್ಷದ ಶಾಸಕರು ಇರುವ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಿಗೆ ಏನೂ ಸಿಕ್ಕಿಲ್ಲ ಎಂಬುದನ್ನು ಬಜೆಟ್ ದಾಖಲೆಗಳೇ ಹೇಳುತ್ತವೆ. ಮೈಲಾರ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿ ಸಹ ಶುಕ್ರದೆಸೆ ಬರಲೇ ಇಲ್ಲ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದ ಮೂಲಸೌಲಭ್ಯ ಅಭಿವೃದ್ಧಿಗೆ, ಪಾಲಿಟೆಕ್ನಿಕ್ ಕಾಲೇಜ್ ಬೇಕು ಎಂಬ ಬೇಡಿಕೆಗೆ ಸ್ಪಂದನವೇ ಸಿಕ್ಕಿಲ್ಲ. ಕೊಟ್ಟೂರಿಗೆ ಆಸ್ಪತ್ರೆ, ಪಟ್ಟಣ ಪಂಚಾಯ್ತಿಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರುವ ಕನಸೂ ಕನಸಾಗಿಯೇ ಉಳಿಯಿತು.