ಬಸವರಾಜ ಬೊಮ್ಮಾಯಿ, ಶಾಸಕ ಬಿ.ಎಸ್. ಯಡಿಯೂರಪ್ಪನವರು ಬಂದು ಒಗ್ಗರಣೆ, ಮಿರ್ಚಿ, ಉಪ್ಪಿಟ್ಟು ಸವಿದರು. ಮೇಜಿನ ಮೇಲೆ ಚಹಾ ತಂದಿಟ್ಟಾಗ ಕೊಲ್ಲಾರಪ್ಪ ಅವರಿಗೆ ಸಿ.ಎಂ. ಚಹಾ ಕೊಟ್ಟು ಅವರೊಂದಿಗೆ ಸವಿದರು. ಕುಟುಂಬ ಸದಸ್ಯರೊಂದಿಗೆ ಮಾತಾಡಿದರು. ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಶಾಸಕ ರಾಜುಗೌಡ, ಸಂಸದ ವೈ.ದೇವೇಂದ್ರಪ್ಪ ಇದ್ದರು.
ಸಿ.ಎಂ ಬರುವ ಮುಂಚೆ ಕೊಲ್ಲಾರಪ್ಪ ಅವರ ಮನೆಗೆ ಹೊರಗಿನಿಂದಲೂ ಉಪಾಹಾರ ತರಿಸಲಾಗಿತ್ತು. ಆದರೆ, ಕೊಲ್ಲಾರಪ್ಪ ಅವರ ಮಕ್ಕಳಾದ ರೇಣುಕಾ, ಹುಲಿಗೆಮ್ಮ ಹಾಗೂ ಅಂಬಮ್ಮ ಅವರು ಸಿದ್ಧಪಡಿಸಿದ ಉಪಾಹಾರವನ್ನೇ ಸಿ.ಎಂ ಇತರರು ಸವಿದರು. ಇದಕ್ಕೂ ಮುನ್ನ ಅವರು ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.