<p>ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ವಿಜಯನಗರ ವಿಭಾಗೀಯ ಮಟ್ಟದಲ್ಲಿ ಶೀಘ್ರದಲ್ಲೇ ಟಿಕೆಟ್ಗೆ ನಗದು ಪಾವತಿ ಬದಲಿಗೆ ಯುಪಿಐ ಮೂಲಕ ಆನ್ಲೈನ್ ಪಾವತಿ ವ್ಯವಸ್ಥೆ ಜಾರಿಗೆ ಬರಲಿದ್ದು, ಅದರ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ.</p>.<p>ರಾಜ್ಯದ ಇತರ ಎರಡೂ ನಿಗಮಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದು, ಕೆಕೆಆರ್ಟಿಸಿಗೆ ಇದು ದೊಡ್ಡ ಕೊರತೆಯಾಗಿತ್ತು. ಸಾಕಷ್ಟು ಬಾರಿ ನಿರ್ವಾಹಕರು ಪ್ರಯಾಣಿಕರಿಂದ ಈ ವಿಷಯದಲ್ಲಿ ಚರ್ಚೆ, ಸಿಟ್ಟು ಎದುರಿಸಬೇಕಾಗಿ ಬಂದಿತ್ತು. ಅದಕ್ಕೆ ಶಾಶ್ವತವಾಗಿ ವಿರಾಮ ನೀಡುವ ಕಾಲ ಸಮೀಪಿಸಿದೆ.</p>.<p>‘ಜಿಲ್ಲೆಯಲ್ಲಿ ಐದು ಡಿಪೋಗಳಿದ್ದು, ಒಂದೊಂದು ಡಿಪೋದಲ್ಲಿ ತಲಾ ಐದು ಬಸ್ಗಳಲ್ಲಿ (ಒಟ್ಟು 25) ವಾರದಿಂಚೀಚೆಗೆ ಯುಪಿಐ ಮೂಲಕ ಟಿಕೆಟ್ ನೀಡುವ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಎಲ್ಲಿಂದಲೂ ಸಮಸ್ಯೆ ಕೇಳಿಬಂದಿಲ್ಲ. ಈ ಯಶಸ್ಸಿನಿಂದಾಗಿ ತೃಪ್ತಿಯಾಗಿದ್ದು, ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಯೋಜನೆ ಇದೆ’ ಎಂದು ಕೆಕೆಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಸ್ಗಳಲ್ಲಿ ಯುಪಿಐ ಸೇವೆ ಬೇಕು ಎಂಬುದು ಪ್ರಯಾಣಿಕರ ಬಹುಕಾಲದ ಬೇಡಿಕೆಯಾಗಿತ್ತು, ಅದು ಶೀಘ್ರ ಈಡೇರುತ್ತಿದೆ, ನಿರ್ವಾಹಕರು ಸಹ ಇನ್ನು ಮುಂದೆ ಚಿಲ್ಲರೆ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಅವರು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-25-1531452248</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ವಿಜಯನಗರ ವಿಭಾಗೀಯ ಮಟ್ಟದಲ್ಲಿ ಶೀಘ್ರದಲ್ಲೇ ಟಿಕೆಟ್ಗೆ ನಗದು ಪಾವತಿ ಬದಲಿಗೆ ಯುಪಿಐ ಮೂಲಕ ಆನ್ಲೈನ್ ಪಾವತಿ ವ್ಯವಸ್ಥೆ ಜಾರಿಗೆ ಬರಲಿದ್ದು, ಅದರ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ.</p>.<p>ರಾಜ್ಯದ ಇತರ ಎರಡೂ ನಿಗಮಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದು, ಕೆಕೆಆರ್ಟಿಸಿಗೆ ಇದು ದೊಡ್ಡ ಕೊರತೆಯಾಗಿತ್ತು. ಸಾಕಷ್ಟು ಬಾರಿ ನಿರ್ವಾಹಕರು ಪ್ರಯಾಣಿಕರಿಂದ ಈ ವಿಷಯದಲ್ಲಿ ಚರ್ಚೆ, ಸಿಟ್ಟು ಎದುರಿಸಬೇಕಾಗಿ ಬಂದಿತ್ತು. ಅದಕ್ಕೆ ಶಾಶ್ವತವಾಗಿ ವಿರಾಮ ನೀಡುವ ಕಾಲ ಸಮೀಪಿಸಿದೆ.</p>.<p>‘ಜಿಲ್ಲೆಯಲ್ಲಿ ಐದು ಡಿಪೋಗಳಿದ್ದು, ಒಂದೊಂದು ಡಿಪೋದಲ್ಲಿ ತಲಾ ಐದು ಬಸ್ಗಳಲ್ಲಿ (ಒಟ್ಟು 25) ವಾರದಿಂಚೀಚೆಗೆ ಯುಪಿಐ ಮೂಲಕ ಟಿಕೆಟ್ ನೀಡುವ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಎಲ್ಲಿಂದಲೂ ಸಮಸ್ಯೆ ಕೇಳಿಬಂದಿಲ್ಲ. ಈ ಯಶಸ್ಸಿನಿಂದಾಗಿ ತೃಪ್ತಿಯಾಗಿದ್ದು, ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಯೋಜನೆ ಇದೆ’ ಎಂದು ಕೆಕೆಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಸ್ಗಳಲ್ಲಿ ಯುಪಿಐ ಸೇವೆ ಬೇಕು ಎಂಬುದು ಪ್ರಯಾಣಿಕರ ಬಹುಕಾಲದ ಬೇಡಿಕೆಯಾಗಿತ್ತು, ಅದು ಶೀಘ್ರ ಈಡೇರುತ್ತಿದೆ, ನಿರ್ವಾಹಕರು ಸಹ ಇನ್ನು ಮುಂದೆ ಚಿಲ್ಲರೆ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಅವರು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-25-1531452248</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>