ಹೊಸಪೇಟೆ (ವಿಜಯನಗರ): ಬಳ್ಳಾರಿಯಲ್ಲಿ ಆಯೋಜಿಸಿದ್ದ ಬಿಜೆಪಿ ನವಶಕ್ತಿ ಎಸ್ಟಿ ಸಮಾವೇಶಕ್ಕೆ ಒಪ್ಪಂದದಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ತೆರಳಿರುವುದರಿಂದ ಜನ ನಗರದ ನಿಲ್ದಾಣದಲ್ಲಿ ಭಾನುವಾರ ಬಸ್ ಗಾಗಿ ಕಾದು ಕಾದು ಸುಸ್ತಾದರು.
ಹೊಸಪೇಟೆ ವಿಭಾಗದ 400ಕ್ಕೂ ಅಧಿಕ ಬಸ್ಸುಗಳು ಸಮಾವೇಶಕ್ಕೆತೆರಳಿದ್ದವು. ಅಂತರ ಜಿಲ್ಲಾ ಬಸ್ ಗಳು ಎಂದಿನಂತೆ ಸಂಚರಿಸಿದವು. ಜಿಲ್ಲೆಯ ಬಸ್ಸುಗಳು ಇರದ ಕಾರಣ ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಸಾಧ್ಯವಾಗಲಿಲ್ಲ.
ಖಾಸಗಿ ವಾಹನಗಳು ಕೂಡ ಸಮಾವೇಶಕ್ಕೆ ತೆರಳಿದ್ದರಿಂದ ಜನರಿಗೆ ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ. ದಿನವಿಡೀ ನಗರದ ಬಸ್ ನಿಲ್ದಾಣದಲ್ಲೇ ಕಾಲ ಕಳೆದರು.
ಸಂಜೆಯ ವೇಳಾಗಾದರೂ ಬಸ್ ಬರಬಹುದೆಂಬ ನಿರೀಕ್ಷೆ ಹುಸಿಯಾಯಿತು. ಗೊಣಗುತ್ತಲೇ ನಿಲ್ದಾಣದಲ್ಲಿ ಕಾದುನಿಂತಿದ್ದರು.