ಮುಷ್ಕರ ಆರಂಭದ ದಿನದಿಂದ ಇದುವರೆಗೆ ನಿತ್ಯ ಬೆರಳೆಣಿಕೆ ಸಂಖ್ಯೆಯ ಬಸ್ಸುಗಳು ಸಂಚಾರ ಬೆಳೆಸುತ್ತಿದ್ದವು. ಭಾನುವಾರ ಈ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು. ಅದರಲ್ಲೂ ಬಳ್ಳಾರಿ, ಕೂಡ್ಲಿಗಿ ಕಡೆಗೆ ಹೆಚ್ಚಾಗಿ ಬಸ್ಗಳು ಸಂಚರಿಸಿದವು. ಕೊಪ್ಪಳ, ಗದಗ ಸೇರಿದಂತೆ ಇತರೆ ಜಿಲ್ಲೆಗಳಿಗೆ ತೆರಳಲು ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬಸ್ಸುಗಳು ಇರಲಿಲ್ಲ.