ಮರು ಮುದ್ರಿಸಿದ ಆಹ್ವಾನ ಪತ್ರಿಕೆಯಲ್ಲಿ ಶ್ರೀರಾಮುಲು ಅವರ ಹೆಸರನ್ನು ಸೇರಿಸಿ, ವಿರೋಧದ ದನಿ ಅಡಗುವಂತೆ ಮಾಡಿದೆ. ಜಿಲ್ಲೆಯ ಕೂಡ್ಲಿಗಿ, ಕಮಲಾಪುರ ಸೇರಿದಂತೆ ಹಲವೆಡೆ ವಾಲ್ಮೀಕಿ ನಾಯಕ ಸಮಾಜದವರು ಜಿಲ್ಲಾಡಳಿತದ ಕ್ರಮವನ್ನು ಟೀಕಿಸಿದ್ದರು. ಶ್ರೀರಾಮುಲು ಅವರ ಹೆಸರನ್ನು ಕೈಬಿಡುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದರು. ಆಹ್ವಾನ ಪತ್ರಿಕೆ ಮರು ಮುದ್ರಿಸಬೇಕೆಂದು ಒತ್ತಾಯಿಸಿದ್ದರು. ಅದಕ್ಕೆ ಜಿಲ್ಲಾಡಳಿತ ಕೊನೆಗೂ ಮಣಿದಿದೆ.