<p>ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ನಡೆದ ಜೋಡಿ ರಥೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಯಲು ಕುಸ್ತಿ ಪಂದ್ಯಾವಳಿಗಳು ನೋಡುಗರ ಗಮನ ಸೆಳೆದವು.</p>.<p>ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಬಯಲು ಅಖಾಡದಲ್ಲಿ ಭಾಗವಹಿಸಿದ್ದರು. ಬ್ರೆಜಿಲ್ ದೇಶದ ಅಂತರರಾಷ್ಟ್ರೀಯ ಕುಸ್ತಿಪಟು ಪ್ರೆಡ್ರಿಕ್ ಮಿಲಾ ಭಾಗವಹಿಸಿದ್ದು ನೋಡುಗರ ಆಕರ್ಷಣೆ ಹೆಚ್ಚಿಸಿತ್ತು.</p>.<p>ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ಅವರು ಪಂಜಾಬ್ ರಾಜ್ಯದ ಹಾಸಿಕ್ ಸಿಂಗ್ ಅವರೊಂದಿಗೆ ಸೆಣಸಾಡಿ ₹1 ಲಕ್ಷ ಬಹುಮಾನ ಪಡೆದರು. ದಾವಣಗೆರೆಯ ಬಸುಪಾಟೀಲ ಅವರು ಬ್ರೆಜಿಲ್ನ ಫ್ರೆಡ್ರಿಕ್ ಮಿಲಾ ಅವರೊಂದಿಗೆ ಸೆಣಸಾಡಿ ₹50 ಸಾವಿರ ಬಹುಮಾನ ಪಡೆದರು.</p>.<p>ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಹೊಸಪೇಟೆಯ ಪರಶುರಾಮ ಹಾಗೂ ಬಲ್ಲಾಹುಣ್ಸಿ ಸುನಿಲ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.</p>.<p>ಉದ್ದೇಕಲ್ ವೆಂಕಟೇಶ್, ಸೈಪುಲ್ಲಾ, ವೆಂಕಟೇಶ್, ಸಣ್ಣ ದುರುಗಪ್ಪ ಸೇರಿದಂತೆ ಇತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಸಿಪಿಐ ವಿಕಾಸ್ ಲಮಾಣಿ ಅವರು ಸೂಕ್ತ ಬಂದೋಬಸ್ತ್ ವಹಿಸಿದ್ದರು.</p>.<p>ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಶಿವಮೂರ್ತಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವೇಳೆ ಚಿದ್ರಿ ಸತೀಶ್, ಎಲ್.ಪರಮೇಶ್ವರಪ್ಪ, ಪಿ.ಸೋಮಪ್ಪ, ಮಜ್ಜಿಗೆ ನಾಗರಾಕ್, ಎಲ್.ವಸಂತ್, ಮರಡಿ ಸುರೇಶ್, ಮೊಹಮ್ಮದ್, ಎಲ್.ಹನುಮಂತ, ಆರ್.ಮಂಜುನಾಥ್, ಕೆಂಚಪ್ಪ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-25-891442696</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ನಡೆದ ಜೋಡಿ ರಥೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಯಲು ಕುಸ್ತಿ ಪಂದ್ಯಾವಳಿಗಳು ನೋಡುಗರ ಗಮನ ಸೆಳೆದವು.</p>.<p>ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಬಯಲು ಅಖಾಡದಲ್ಲಿ ಭಾಗವಹಿಸಿದ್ದರು. ಬ್ರೆಜಿಲ್ ದೇಶದ ಅಂತರರಾಷ್ಟ್ರೀಯ ಕುಸ್ತಿಪಟು ಪ್ರೆಡ್ರಿಕ್ ಮಿಲಾ ಭಾಗವಹಿಸಿದ್ದು ನೋಡುಗರ ಆಕರ್ಷಣೆ ಹೆಚ್ಚಿಸಿತ್ತು.</p>.<p>ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ಅವರು ಪಂಜಾಬ್ ರಾಜ್ಯದ ಹಾಸಿಕ್ ಸಿಂಗ್ ಅವರೊಂದಿಗೆ ಸೆಣಸಾಡಿ ₹1 ಲಕ್ಷ ಬಹುಮಾನ ಪಡೆದರು. ದಾವಣಗೆರೆಯ ಬಸುಪಾಟೀಲ ಅವರು ಬ್ರೆಜಿಲ್ನ ಫ್ರೆಡ್ರಿಕ್ ಮಿಲಾ ಅವರೊಂದಿಗೆ ಸೆಣಸಾಡಿ ₹50 ಸಾವಿರ ಬಹುಮಾನ ಪಡೆದರು.</p>.<p>ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಹೊಸಪೇಟೆಯ ಪರಶುರಾಮ ಹಾಗೂ ಬಲ್ಲಾಹುಣ್ಸಿ ಸುನಿಲ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.</p>.<p>ಉದ್ದೇಕಲ್ ವೆಂಕಟೇಶ್, ಸೈಪುಲ್ಲಾ, ವೆಂಕಟೇಶ್, ಸಣ್ಣ ದುರುಗಪ್ಪ ಸೇರಿದಂತೆ ಇತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಸಿಪಿಐ ವಿಕಾಸ್ ಲಮಾಣಿ ಅವರು ಸೂಕ್ತ ಬಂದೋಬಸ್ತ್ ವಹಿಸಿದ್ದರು.</p>.<p>ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಶಿವಮೂರ್ತಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವೇಳೆ ಚಿದ್ರಿ ಸತೀಶ್, ಎಲ್.ಪರಮೇಶ್ವರಪ್ಪ, ಪಿ.ಸೋಮಪ್ಪ, ಮಜ್ಜಿಗೆ ನಾಗರಾಕ್, ಎಲ್.ವಸಂತ್, ಮರಡಿ ಸುರೇಶ್, ಮೊಹಮ್ಮದ್, ಎಲ್.ಹನುಮಂತ, ಆರ್.ಮಂಜುನಾಥ್, ಕೆಂಚಪ್ಪ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-25-891442696</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>