‘ಸುಮಾರು ಒಂದು ತಿಂಗಳಿಂದ ಕೋತಿ ಹಾವಳಿ ಇತ್ತು. ಕೊನೆಗೂ ದಾಳಿಕೋರ ಕೋತಿಯನ್ನು ಸೆರೆ ಹಿಡಿದಿರುವುದರಿಂದ ಜನತೆ ನೆಮ್ಮದಿ ಅನುಭವಿಸುವಂತಾಗಿದೆ. ಈ ಕಾರ್ಯಾಚರಣೆಗಾಗಿ ನಗರಸಭೆ ಮತ್ತು ಅರಣ್ಯ ಇಲಾಖೆಗೆ ಧನ್ಯವಾದ. ಆದರೆ ಇಂತಹ ಕಾರ್ಯಾಚರಣೆ ನಡೆಸಲು ಭಗತ್ ಸಿಂಗ್ ರಕ್ತದಾನಿಗಳ ಸಂಘವು ತೀವ್ರ ಒತ್ತಡ ಹಾಕುವ ತನಕ ಕಾದಿರುವುದು ಸರಿಯಲ್ಲ. ಸುಮಾರು 20 ಮಂದಿಗೆ ಕೋತಿ ಕಡಿಯುವ ತನಕವೂ ಸುಮ್ಮನಿದ್ದ ಆಡಳಿತ ವ್ಯವಸ್ಥೆ, ಸಂಘ ಒತ್ತಡ ಹಾಕಿದ ಬಳಿಕವಷ್ಟೇ ಕೋತಿ ಸೆರೆಗೆ ಕಾರ್ಯಾಚರಣೆ ನಡೆಸಿದ್ದು ಜಡ್ಡುಗಟ್ಟಿದ ವ್ಯವಸ್ಥೆಗೆ ಸಾಕ್ಷಿ‘ ಎಂದು ಭಗತ್ ಸಿಂಗ್ ರಕ್ತದಾನಿಗಳ ಸಂಘ ತಿಳಿಸಿದೆ.